ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ನಡೆದ ಸಾಲಗಾರರಲ್ಲದ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಕೆ.ಎಲ್.ಆನಂದ್ ಜಯಗಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಪಟ್ಟಣದ ಕೆ.ಎಲ್.ಆನಂದ್ ೮೬ ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ದಿ ರವಿವರ್ಮ ೭೪ ಮತಗಳನ್ನು ಪಡೆಯುವುದರೊಂದಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಲ್.ಆನಂದ್ ೧೨ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೋಳಾಲ ಹೋಬಳಿಯ ಸಾಲಗಾರರ ಕ್ಷೇತ್ರದ ೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿಗಳಾದ ದುಡ್ಡನಹಳ್ಳಿ ಡಿ.ಸಿ.ರವೀಂದ್ರ ೬೪ ಮತಗಳು, ಹೊಸಕೋಟೆ ಕಾಮಣ್ಣ ೫೦ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಿ.ಟಿ.ಓ ಗುರುಮೂರ್ತಿ ಕರ್ತವ್ಯ ನಿರ್ವಹಿಸಿದರು.ಅವಿರೋಧ ಆಯ್ಕೆ: ಉಳಿದಂತೆ ಕೊರಟಗೆರೆ ಲಕ್ಷ್ಮಿನಾರಾಯಣ್, ಚಿಕ್ಕರಂಗಯ್ಯ, ನೇತ್ರಾವತಿ, ಚೀಲಗಾನಹಳ್ಳಿ ಎಲ್.ರಾಜಣ್ಣ, ಮರೇನಾಯಕನಹಳ್ಳಿ ಪುಟ್ಟನರಸಪ್ಪ, ಲಂಕೇನಹಳ್ಳಿ ಎಲ್.ವಿ.ಪ್ರಕಾಶ್, ಅಲಪನಹಳ್ಳಿ ವೆಂಕಟೇಗೌಡ, ಗಟ್ಲಗೊಲ್ಲಹಳ್ಳಿ ಕೆಂಚಮ್ಮ, ಕುರುಡಗಾನಹಳ್ಳಿ ರಂಗಯ್ಯ, ಮಾವತ್ತೂರು ವೆಂಕಟಪ್ಪ, ಬುಕ್ಕಾಪಟ್ಟಣ ನಾಗರಾಜಯ್ಯ ಅವಿರೋದವಾಗಿ ಆಯ್ಕೆಯಾಗಿದ್ದಾರೆ, ನೂತನ ನಿರ್ದೇಶಕ ಕೆ.ಎಲ್.ಆನಂದ್ ಮಾತನಾಡಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಆಶ್ರೀರ್ವಾದ ಮತ್ತು ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರ ಶ್ರಮ, ಮತದಾರರ ಒಲವಿನಿಂದ ಜಯಗಳಲಿಸಿದ್ದು ಬ್ಯಾಂಕ್ನ ಶೇರುದಾರರ ಮತ್ತು ರೈತರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷ ಜಯಮ್ಮ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನಕುಮಾರ್, ಪ.ಪಂ.ಸದಸ್ಯ ಕೆ.ಆರ್.ಓಬಳಾಜು, ನಾಗರಾಜು, ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಪ್ಪ, ಮಾಜಿ ಅಧ್ಯಕ್ಷ ಹೂಲಿಕುಂಟೆ ಪ್ರಸಾದ್, ಮುಖಂಡರುಗಳಾದ ಜಯರಾಂ, ಎಲ್.ರಾಜಣ್ಣ, ಬೂಚನಹಳ್ಳಿ ವೆಂಕಟೇಶ್, ಬಿ.ಡಿ.ಪುರ ಸುರೇಶ್, ರಾಘವೇಂದ್ರ, ಗಟ್ಲಹಳ್ಳಿ ರವಿಕುಮಾರ್, ಕೆ.ವಿ.ಮಂಜುನಾಥ್, ಕೆ.ಬಿ.ಲೋಕೇಶ್, ತುಂಗಾ ಮಂಜುನಾಥ್, ನೇಗಲಾಲ ರಮೇಶ, ಭರತ್, ಅರವಿಂದ್, ಏರ್ಟೈಲ್ಗೋಪಿ, ವೆಂಕಟರಾಜು, ನಾಗೇಶ್, ಭೈರೇಶ್, ಕಾರ್ ಮಹೇಶ್, ಕಾಮರಾಜು, ಸಿದ್ದಮಲ್ಲಪ್ಪ, ಹನುಮಂತರಾಯಪ್ಪ, ಮಾವತ್ತೂರು ಮಂಜುನಾಥ್, ನಟರಾಜು, ರಮೇಶ್, ಜಗದೀಶ್, ಸೇರಿದಂತೆ ಇನ್ನಿತರರು ಹಾಜರಿದ್ದರು.