ಕುಕನೂರು: ಕೆಎಲ್ಇ ಸಂಸ್ಥೆ ಶಿಕ್ಷಣ ಜತೆಗೆ ಸಂಸ್ಕಾರ ಸಹ ನೀಡಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಸಿ. ಪಾಟೀಲ್ ಹೇಳಿದರು.
ಉಪನ್ಯಾಸಕ ಎಸ್.ಎಸ್.ರಾಜೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೆಎಲ್ಇ ಸಂಸ್ಥೆಯು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ ಎಂದರು.
ಉಪನ್ಯಾಸಕ ಕುಂಟೆಪ್ಪ ಬೇವೂರ ಮಾತನಾಡಿ, ಏಳು ಜನ ಶಿಕ್ಷಕರಿಂದ ಸ್ಥಾಪಿಸಲ್ಪಟ್ಟ ಕೆಎಲ್ಇ ಸಂಸ್ಥೆಯು ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹದಾಕಾರವಾಗಿ ಬೆಳೆದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಹಿರೇಮಠ ಮಾತನಾಡಿ ಸಂಸ್ಥೆ ಕಟ್ಟಿದ ಮಹನೀಯರನ್ನು ಸ್ಮರಿಸಿದರು.ಉಪನ್ಯಾಸಕ ಶರಣಪ್ಪ ಉಮಚಗಿ, ನೇತ್ರಾವತಿ ಎಸ್ ಉಳ್ಳಾಗಡ್ಡಿ, ಕಿರಣಕುಮಾರ, ಮಂಜುಳಾ ಎಂ. ಪೂಜಾ ಸಸಿಮಠ ಇತರರಿದ್ದರು.