ಕನ್ನಡಪ್ರಭ ವಾರ್ತೆ ತರೀಕೆರೆ
ಎಸ್.ಜೆ.ಎಂ. ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಮತ್ತು ಪ್ರಥಮ ಬಿ.ಎ. ಬಿ.ಕಾಂ. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಅಬ್ದುಲ್ ಕಲಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ರವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು, ನನ್ನ ಗುರುಗಳೆ ನನ್ನ ಈ ಯಶಸ್ಸಿಗೆ ಸ್ಪೂರ್ತಿ.ಆದ್ದರಿಂದ ಪ್ರತಿಯಬ್ಬ ವಿದ್ಯಾರ್ಥಿಯು ಗುರುಹಿರಿಯರಲ್ಲಿ ಭಕ್ತಿ, ಶ್ರದ್ಧೆ ಹೊಂದಿ ಗುರುಗಳಲ್ಲಿರುವ ಅಪಾರ ಜ್ಞಾನಸಂಪತ್ತನ್ನು ಬಳಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಜೀವನ ಹಸನಾಗುತ್ತದೆ ಎಂದು ಹೇಳಿದರು.ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಣ್ಮೆಯಿಂದ ಮಾತನಾಡಬೇಕು. ಸಂಸ್ಕಾರವಂತರಾಗಬೇಕು, ಜ್ಞಾನವಂತರಾಗಬೇಕು, ಆದ್ದರಿಂದ ಕಲಿಕೆ ನಿರಂತರವಾಗಿರಬೇಕು ಕಲಿಕೆ ಸೃಜನಶೀಲತೆಗೆ, ಸೃಜನಶೀಲತೆ ಚಿಂತನೆಗೆ, ಚಿಂತನೆ ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಒಕ್ಕೂಟದ ಚೇರಮನ್ ಡಾ.ಸದಾಶಿವನಾಯ್ಕ ಎ. ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ನಿರ್ಮಿಸುವುದೇ ಶಿಕ್ಷಣ, ಸ್ವಾಮಿ ವಿವೇಕಾನಂದರ ಪ್ರಕಾರ ಮಾನವನಲ್ಲಿ ಈಗಾಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ಹೊರತರುವುದೇ ಶಿಕ್ಷಣ ಎಂಬ ವಾಣಿಯಂತೆ ನಮ್ಮ ಮಹಾವಿದ್ಯಾಲಯವು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು ವರ್ಷ ಪೂರ್ತಿಒಂದಲ್ಲ ಒಂದು ಕಾರ್ಯಕ್ರಮಗಳು ನಮ್ಮ ಮಹಾವದ್ಯಾಲಯದಲ್ಲಿ ನಡೆಯುತ್ತಿರುತ್ತವೆ ಎಂದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ವೆಂಕಟೇಶ ಆರ್. ಎನ್.ಎಸ್.ಎಸ್. ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಡಾ.ಶಿವರಾಜಕುಮಾರ ಕ. ಮತ್ತು ದೈಹಿಕ ಶಿಕ್ಷಣ ನಿದೇಶಕ ಜೆ.ರಘು ಅತಿಥಿಗಳ ಪರಿಚಯ ಮಾಡಿಕೊಟ್ಟರು.