
ಕನ್ನಡಪ್ರಭ ವಾರ್ತೆ, ತುಮಕೂರು
ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಜ್ಞಾನವೇ ಸಂಪತ್ತು. ಜ್ಞಾನವನ್ನು ಬಳಕೆಮಾಡಿಕೊಂಡು ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜವನ್ನು, ಬದುಕನ್ನು ಬೆಳಗಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಣ ಮುಗಿಸಿ ನೀವೆಲ್ಲರೂ ಈಗ ಉದ್ಯೋಗ, ವ್ಯವಹಾರ ಆರಂಭಿಸಿ ದುಡಿಮೆ ಮಾಡುತ್ತಿದ್ದೀರಿ. ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದೀರಿ. ಇಂತಹ ನೀವು ಎಂದೋ ಪಾಠ ಹೇಳಿದ ಉಪನ್ಯಾಸಕರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು, ಗುರುಗಳ ಬಗ್ಗೆ ಇರುವ ಗೌರವ ಭಾವನೆ ಹಾಗೂ ವಿದ್ಯೆಯ ಮಹತ್ವ ತಿಳಿದಿರುವ ಮಾದರಿ ಪ್ರಜೆಗಳಾಗಿದ್ದೀರಿ. ನಿಮ್ಮ ಮಕ್ಕಳಿಗೂ ಇಂತಹುದ್ದೇ ಸಂಸ್ಕಾರ ಕಲಿಸಿ ಅವರೂ ಉತ್ತಮ ಸ್ಥಾನಮಾನ ಪಡೆಯಲು ನೀವು ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.ಶಾಲಾಕಾಲೇಜಿನಲ್ಲಿ ಗುರುಗಳು ಹೇಳಿಕೊಡುವ ಶಿಕ್ಷಣ ಸಾಮಾನ್ಯವೇ ಆದರೂ ಅದರ ಜ್ಞಾನದಿಂದ ಹೆಚ್ಚಿನ ತಿಳುವಳಿಕೆ ಹೊಂದಿ ಬೆಳೆಯುವುದು ಬುದ್ಧಿವಂತರ ಲಕ್ಷಣ. ನೀವೆಲ್ಲರೂ ಅ ಮಾರ್ಗದಲ್ಲಿರುವುದು ಸಂತಸವಾಗಿದೆ. ನಿಮಗೆ ವಿದ್ಯೆ ಕಲಿಸಿದ ನಮಗೂ ಹೆಮ್ಮೆಯಾಗಿದೆ ಎಂದರು.