ನರಗುಂದ: ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆಯಲಿರುವ ಭಾರತ ಪರ್ವ 25ರ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಾಯೋಜಿತ ಕಲಾ ತಂಡವಾಗಿ ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಪ್ರಕಾಶ ಕ. ಚಂದಣ್ಣವರ ನೇತೃತ್ವದ ಜೈಕಿಸಾನ್ ಕಲಾ ತಂಡದ ಜೋಗತಿ ನೃತ್ಯ ಆಯ್ಕೆಗೊಂಡಿದೆ.
ಕೊಣ್ಣೂರ ವಿರಕ್ತಮಠದ ಡಾ. ಶಿವಕುಮಾರ ಮಹಾಸ್ವಾಮಿ, ಡಾ. ಶಿವಾನಂದ ದೇವರು, ಹಿರೇಮಠದ ಸಿದ್ದಲಿಂಗ ಶ್ರೀಗಳು, ಭೈರನಹಟ್ಟಿ ಶ್ರೀಗಳು, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ರಾಜುಗೌಡ ಕೆಂಚನಗೌಡ, ಟಿ.ಬಿ. ಶಿರಿಯಾಪ್ಪಗೌಡ್ರ, ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಕಳಸಣ್ಣವರ, ಇಸಾಕ್ ಮಸೂತಿಮನಿ, ಕೆ.ಎಚ್. ವಾಸನ, ಎಸ್.ಸಿ. ಶೇಬಣ್ಣವರ, ಕೆ.ಎಸ್. ಖೋದಾನಪುರ, ಮಂಜು ವಜ್ರಾಂಗಿ, ಬಿ.ವಿ. ನರಗುಂದ, ಕೆ.ಬಿ. ಹಿರೇಹೊಳಿ, ಎನ್.ಕೆ. ಸೋಮಾಪುರ, ಸಿ.ಆರ್. ಸಾಲಿಗೌಡ್ರ, ಬಾಬು ಹಿರೇಹೂಳಿ, ವಿ.ಎಸ್. ಕಂಬಳಿ, ಜಿ.ಬಿ. ಹುಜರತ್ತಿ, ಬಿ.ಎಚ್. ವಾಸನ, ಮುತ್ತು ಮಳಲಿ, ಸತ್ಯಪ್ಪ ಬಾರಕೇರ, ಎಂ.ಡಿ. ದೂಡಮನಿ, ಭರತಪ್ಪ ತಳವಾರ, ಖಾನಸಾಬ್ ಮಸೂತಿಮನಿ, ಮಹಮ್ಮದ ಶಫಿ ಖಾಜಿ, ಮಾನಪ್ಪ ಬಡಿಗೇರ, ಪುಂಡಲೀಕ ದಾಸರ ಹಾಗೂ ಗ್ರಾಮದ ಸಮಸ್ತ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.