ಬಹುತೇಕ ಪ್ರದೇಶಗಳಲ್ಲಿ ಮನೆಗೆ ನುಗ್ಗಿದ ನೀರು
ಕೆರೆಯಂತಾದ ಹಮಾಲರ ಕಾಲನಿ, ರಾಯರಮಠ
ನಾಲ್ಕಾರು ಗಂಟೆ ಎಡೆಬಿಡದೆ ಸುರಿದ ಮಳೆಕನ್ನಡಪ್ರಭ ವಾರ್ತೆ ಕೊಪ್ಪಳಸಿದ್ಧೇಶ್ವರ ಕಾಲನಿ, ಗಣೇಶ ನಗರ, ಪದಕಿ ಲೇ ಔಟ್, ರಾಯರ ಮಠ, ರೈಲ್ವೆ ನಿಲ್ದಾಣ ಪ್ರದೇಶ ಹೀಗೆ ಕೊಪ್ಪಳದ ಬಹುತೇಕ ಭಾಗ ಅಕ್ಷರಶಃ ಮುಳುಗಿದೆ. ರಸ್ತೆಗಳು ನದಿಯಂತೆ ಹರಿಯುತ್ತಿದ್ದು, ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಅಷ್ಟೇ ಯಾಕೆ, ನಗರದ ರಾಜಕಾಲುವೆ ಮತ್ತು ಭಾಗ್ಯನಗರ ರಾಜಕಾಲುವೆ ಪ್ರವಾಹದಿಂದಾಗಿ ಉಕ್ಕಿ ಹರಿದಿವೆ.
ನಗರದ ಗಣೇಶ ತಗ್ಗು ಎಂದೇ ಕರೆಯುವ ಗಣೇಶನಗರ ಸಂಪೂರ್ಣ ಮುಳುಗಿತ್ತು. ಬಹುತೇಕ ಮನೆಯಲ್ಲಿ ನೀರು ನುಗ್ಗಿದ್ದರೇ ಸುತ್ತಲು ನೀರು ನಿಂತು ನಡುಗಡ್ಡೆಯಂತಾಗಿತ್ತು. ಗಣೇಶ ನಗರಕ್ಕೆ ಬರುವುದಕ್ಕೆ ಎಲ್ಲಿಯೂ ದಾರಿ ಇಲ್ಲದಂತೆ ನೀರುಕಟ್ಟಿಕೊಂಡಿತು. ಹೀಗಾಗಿ, ರಾತ್ರಿಯಾದರೂ ಮಕ್ಕಳು ಮನೆಗೆ ಬಾರದಂತೆ ಆದಾಗ ಪಾಲಕರೇ ಹೇಗೋ ಕಷ್ಟಪಟ್ಟು ಹೋಗಿ ಮಕ್ಕಳನ್ನು ಮನೆಗೆ ಕರೆತಂದರು.
ಕಿನ್ನಾಳ ರಸ್ತೆಯಲ್ಲಿ ನದಿಯಂತೆ ನೀರು ಹರಿಯಲಾರಂಭಿಸಿದ್ದರಿಂದ ಪ್ರಗತಿ ಕಾಲನಿ ಬಳಿ ಸಂಚಾರವೇ ಬಂದಾಗಿದ್ದರಿಂದ ಮನೆಗೆ ಹೋಗಬೇಕಾದವರು ರಸ್ತೆಯಲ್ಲಿಯೇ ಕಾಲಕಳೆಯುವಂತೆ ಆಯಿತು.
ಭಾಗ್ಯನಗರ ಬಳಿ ಇರುವ ಸಿದ್ಧೇಶ್ವರ ಕಾಲನಿ, ಗವಿಮಠ ಬಳಿ ಇರುವ ಹಮಾಲರ ಕಾಲನಿ ಅಕ್ಷರಶಃ ಮುಳುಗಿದ್ದವು. ಮನೆಯಲ್ಲಿ ನೀರು ನುಗ್ಗಿದ್ದರಿಂದ ಜನರು ಬೆಚ್ಚಿಬಿದ್ದು, ಮಳೆಯಲ್ಲಿಯೇ ಆಚೆ ಬರುವಂತೆ ಆಯಿತು.
ಜೆಪಿ ಮಾರುಕಟ್ಟೆಯಲ್ಲಿ ಸಂಪೂರ್ಣ ನೀರು ನುಗ್ಗಿದ್ದರಿಂದ ತರಕಾರಿಯ ಅಂಗಡಿಗಳೆಲ್ಲ ನೀರುಮಯವಾದವು. ಹೀಗಾಗಿ, ಲಕ್ಷಾಂತರ ರುಪಾಯಿ ತರಕಾರಿ ಕೆಟ್ಟು ಹೋಯಿತು. ಜವಾಹರ ರಸ್ತೆಯಲ್ಲಿಯೂ ಸಹ ಹಳ್ಳದಂತೆ ನೀರು ಹರಿಯಿತು.ರಾಘವೇಂದ್ರಮಠದ ಪ್ರದೇಶ ಮೊದಲ ಬಾರಿಗೆ ಮುಳುಗಿದಂತೆ ಆಯಿತು. ರಾಯರಮಠದ ಸುತ್ತಲು ಇರುವ ರಸ್ತೆಗಳಲ್ಲ ಕೆರೆಯಂತಾಗಿ ಮನೆಗಳಿಗೆ ನೀರು ನುಗ್ಗಿವೆ. ಜನರು ಪರಿತಪಿಸಿದರು.ಮುಳುಗಿದ ರೈಲ್ವೆ ಸ್ಟೇಷನ್:
ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಎದೆಮಟ್ಟದವರೆಗೂ ನೀರು ಇರುವುದರಿಂದ ಪ್ರಯಾಣಿಕರು ಹೋಗುವಂತೆಯೂ ಇಲ್ಲ, ಬರುವಂತೆಯೂ ಇಲ್ಲ ಎನ್ನುವಂತೆ ಆಗಿತ್ತು. ನಡುಮಟ್ಟದ ನೀರಿನಲ್ಲಿಯೇ ಸಿಬ್ಬಂದಿಯೋರ್ವ ತಳ್ಳುಗಡಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ.ಮುಳುಗಿದ ಸೇತುವೆ:
ತುಂಬಿದ ಕೆರೆಗಳು:ತಾಲೂಕಿನಾದ್ಯಂತ ಮಳೆಗೆ ಕೆರೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಬೇಸಿಗೆ ದಿನಗಳಲ್ಲಿ ಬರಿದಾಗಿದ್ದ ಕೆರೆಗಳ ಒಡಲುಗಳು ನೀರಿನಿಂದ ಆವೃತ್ತವಾಗಿವೆ. ಹಳ್ಳಗಳು ಸಹ ತುಂಬಿ ಹರಿಯುತ್ತಿದ್ದು, ತಾಲೂಕಿನ ಅರಕೇರಿ ಡ್ಯಾಂಗೆ ನೀರು ಹರಿದು ಹೋಗುತ್ತಿದೆ.
ಎಳೆ ಬೆಳೆ ಕೊಳೆವ ಭಯ:ಇನ್ನೂ ಉತ್ತಮ ಮಳೆಯಿಂದ ರೈತರು ಈಗಾಗಲೇ ತಾಲೂಕಿನಾದ್ಯಂತ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ. ಈಗಿನ್ನೂ ಮೊಳೆಕೆ ಒಡೆದು ನೆಲ ಭರ್ತಿ ಬಂದಿರುವ ಎಳೆ ಬೆಳೆ ಈ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಎಲ್ಲಿ ಕೊಳೆತು ಹೋಗುತ್ತದೆಯೋ, ಹಳದಿ ಆಗುತ್ತದೆಯೋ ಎಂಬ ಭಯ ರೈತ ವರ್ಗದಲ್ಲಿ ಮೂಡಿಸಿದೆ. ಸೋಮವಾರದಿಂದ ಮಳೆ ಬಿಡುವಿಲ್ಲದೆ ಸುರಿಯುತ್ತಿದ್ದು, ಮಂಗಳವಾರ, ಬುಧವಾರ ಎರಡೂ ದಿನ ಒಂದು ತಾಸೋತ್ತು ಬಿಡುವಿಲ್ಲದೆ ಮಳೆ ಸುರಿದಿದೆ. ಹೀಗೆ ಮಳೆ ತನ್ನ ಆರ್ಭಟ ಮುಂದುವರೆಸಿದರೆ ಜನರಿಗೆ ಮಳೆಯಿಂದ ಹೊರಗಡೆ ಹೋಗದಷ್ಟು ತೊಂದರೆ ಆಗುತ್ತದೆ.