ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಶರಣರ ಜಯಂತ್ಯುತ್ಸವ ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 891ನೇ ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 601ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು ಸಮಗ್ರ ಕ್ರಾಂತಿ ಯುಗಪುರುಷ, ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದವರು ಎಂದರು.
ಹೇಮರೆಡ್ಡಿ ಮಲ್ಲಮ್ಮನ ಬಾಳು ಪವಿತ್ರ ಮೌಲ್ಯಗಳ, ಆದರ್ಶದ ಅತ್ಯಮೂಲ್ಯ ಕಣಜವಾಗಿದೆ. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ನೆರವು ನೀಡುತಿದ್ದರು. ಅವರ ಧೈರ್ಯ ಹಾಗೂ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ಕರವೇ ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಹಣಮಂತ ಖಾನಳ್ಳಿ, ಸಾಹೇಬಗೌಡ ಗೌಡಗೇರಾ, ಸಿದ್ಧರಾಮರೆಡ್ಡಿ ಚಿನ್ನಾಕಾರ್, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಶರಣು ಸಾಹುಕಾರ, ಶರಣಗೌಡ ಕನ್ಯಾಕೌಳೂರು, ನಾಗು ತಾಂಡೂಲ್ಕರ್, ಶಾಂತು ಕಲಾಲ್, ರಮೇಶ ಡಿ. ನಾಯಕ, ಇರ್ಫಾನ್ ಪಟೇಲ್ ಇದ್ದರು.