ವಾಲ್ಮೀಕಿ ಹಗರಣದ ಹೋರಾಟಗಾರರಿಗೆ ಅಭಿನಂದನೆ

KannadaprabhaNewsNetwork |  
Published : Dec 09, 2024, 12:47 AM IST
ಪಟ್ಟಣದ ಮದಕರಿ ವೃತ್ತದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಲು ಸಿದ್ದತೆ ಮಾಡುತ್ತಿರುವ ಮದಕರಿ ನಾಯಕರ ಪ್ರತಿಮೆಗೆ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾಲಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಹೊಸದುರ್ಗ: ವಾಲ್ಮೀಕಿ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇಡಲಾಗಿದ್ದ 188.6 ಕೋಟಿ ರು. ಹಣ ದುರುಪಯೋಗವಾಗಿದ್ದು, ಇದರ ಬಗ್ಗೆ ಹೋರಾಟ ಮಾಡಿದ ವಿರೋಧ ಪಕ್ಷದವರಿಗೆ ಅಭಿನಂದಿಸುತ್ತೇನೆ ಎಂದು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

ಹೊಸದುರ್ಗ: ವಾಲ್ಮೀಕಿ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇಡಲಾಗಿದ್ದ 188.6 ಕೋಟಿ ರು. ಹಣ ದುರುಪಯೋಗವಾಗಿದ್ದು, ಇದರ ಬಗ್ಗೆ ಹೋರಾಟ ಮಾಡಿದ ವಿರೋಧ ಪಕ್ಷದವರಿಗೆ ಅಭಿನಂದಿಸುತ್ತೇನೆ ಎಂದು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಮದಕರಿ ವೃತ್ತದಲ್ಲಿ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿಗಳ ಮುಡಾ ಪ್ರಕರಣ ಬೆಳಕಿಗೆ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣದ ಹೋರಾಟ ನಿಂತೆ ಹೋಯಿತು. ನಂತರ ನಾನು ಮತ್ತು ನಮ್ಮ ಎರಡು ಜನ ಸಚಿವರು 13 ಜನ ಶಾಸಕರ ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಅವರು ಎಸ್ಐಟಿ ತನಿಖೆ ಮಾಡಿ ಹಣವನ್ನು ವಾಪಾಸು ತರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಚುನಾವಣೆ ಬಂದಾಗ ಮಾತ್ರ ನಮ್ಮನ್ನು ಆಳುವ ಎಲ್ಲಾ ಸರ್ಕಾರಗಳು ನಮ್ಮನ್ನ ಓಲೈಕೆ ಮಾಡಿ ಮತ ಪಡೆದು ಚುನಾವಣೆ ನಂತರ ವಾಲ್ಮೀಕಿ ಸಮುದಾಯದ ಹಿತವನ್ನೇ ಮರೆಯುತ್ತಾರೆ. ಅಂಬೇಡ್ಕರ್ ನಮಗೆ ಸಂವಿಧಾನ ಬದ್ಧ ಹಕ್ಕು ನೀಡಿದ್ದು, ಹೋರಾಟವನ್ನಾದರೂ ಮಾಡಿ ಸಮುದಾಯಗಳಿಗೆ ಬರುವ ಹಕ್ಕನ್ನು ಪಡೆದುಕೊಳ್ಳದೇ ಬಿಡೇವು ಎಂದರು.

ಫೆ.8, 9ಕ್ಕೆ ವಾಲ್ಮೀಕಿ ಜಾತ್ರೆ: ನಾರದ ಮಹರ್ಷಿಗಳಿಂದ ಪ್ರಭಾವಿತವಾಗಿ ರಾಮ ತಾರಕ ಮಂತ್ರ ಜಪಿಸಿದ ರತ್ನಾಕರ ಮಹರ್ಷಿ ವಾಲ್ಮೀಕಿಯಾದರು. ಸಮಾಜದ ಜಾಗೃತಿಗಾಗಿ ವಾಲ್ಮೀಕಿಯ ಆದರ್ಶ ಗುಣಗಳನ್ನು ಯುವ ಪೀಳಿಗೆ ತಿಳಿಸುವ ಉದ್ದೇಶದಿಂದ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ವಾಲ್ಮೀಕಿ ಜಾತ್ರೆಯನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಬೀದರ್‌ನಿಂದ ಚಾಮರಾಜನಗರದ ವರೆಗೆ ಪ್ರವಾಸ ಮಾಡಿ ಸಮಾಜದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಖಂಡರುಗಳು ಪಕ್ಷ ಪ್ರತಿಷ್ಠೆಯ ಧೂಳನ್ನು ಹೊರಗೆ ಹಾಕಿ ಸಮಾಜವನ್ನು ಸಂಘಟಿಸಲು ಕೈ ಜೋಡಿಸಿ ವಾಲ್ಮೀಕಿ ಮಹರ್ಷಿಯ ವೈಚಾರಿಕತೆ ಹಾಗೂ ಜಾಗೃತಿ ಜಾತ್ರೆಗೆ ಎಲ್ಲಾ ಸಮಾಜದ ಬಂಧುಗಳು ಆಗಮಿಸಿ ನಮ್ಮೆಲ್ಲರ ಕುಲ ಗುರು ಮಹರ್ಷಿ ವಾಲ್ಮೀಕಿಯವರ ಆಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹರ್ತಿಕೋಟೆ ವೀರೇಂದ್ರ ಸಿಂಹ, ರಾಜಾವೀರ ಮದಕರಿ ನಾಯಕ ಹುಟ್ಟಿದ ಊರು ಹೊಸದುರ್ಗದ ಜಾನಕಲ್, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನೀವೇ ಪುಣ್ಯವಂತರು, ಮದಕರಿಗೆ ಎದುರು ನಿಂತು ಗೆದ್ದಿರುವ ರಾಜರಿಲ್ಲ. ಮೋಸದಿಂದ ಹೈದರಾಲಿ ಅವರನ್ನು ಬಂಧಿಸಿದ. ಮದಕರಿ ನಾಯಕನ ತೇಜಸ್ಸು ಧೈರ್ಯ ಪರಾಕ್ರಮ ಬೇರೆ ಯಾವ ದೊರೆಗಳಲ್ಲೂ ಕಾಣಲು ಸಾಧ್ಯವೇ ಇಲ್ಲ ಎಂದರು.

ನಾಯಕ ಸಮಾಜ ಸಂಘಟಿಸಿ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜದ ಬೇಡಿಕೆಯನ್ನು ಇಡಲಿದ್ದಾರೆ. 400 ದಿನ ಪಾದವಾತ್ರೆ ಮಾಡಿ ಚಳಿ ಮಳೆಗೆ ಜಗ್ಗದೇ 257 ದಿನ ಸತ್ಯಾಗ್ರಹದ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನು ವಾಲ್ಮೀಕಿ ಸ್ವಾಮೀಜಿ ಕೊಡಿಸಿದ್ದಾರೆ. ರಾಜಕೀಯ ಶಿಕ್ಷಣ ಹಾಗೂ ಸಾಮಾಜಿಕವಾಗಿ ಪ್ರಸನ್ನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯ ಸಂಘಟನೆಯಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ನಾಯಕ ಸಮಾಜದ ಅಧ್ಯಕ್ಷ ರಂಗನಾಥ್, ತರೀಕೆರೆ ವಾಲ್ಮೀಕಿ ಸಮುದಾಯದ ಅಧ್ಯಕ್ಷ ಗೋವಿಂದಪ್ಪ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಬಂಧುಗಳು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...