ಸಹಸ್ರತಾಲ್ ದುರಂತದಲ್ಲಿ ಮೃತಪಟ್ಟ ಕುಂದಾಪುರ ಮೂಲದ ಪದ್ಮನಾಭ ಭಟ್

KannadaprabhaNewsNetwork |  
Published : Jun 08, 2024, 12:32 AM IST
11 | Kannada Prabha

ಸಾರಾಂಶ

ಪದ್ಮನಾಭ ಭಟ್ ಬೆಂಗಳೂರಿಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಣ ಪಡೆದವರು, ಅಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉತ್ತರಾಖಂಡ ರಾಜ್ಯದ ಸಹಸ್ರತಾಲ್ ಚಾರಣ ದುರಂತದಲ್ಲಿ ಮೃತಪಟ್ಟ ರಾಜ್ಯದ 9 ಮಂದಿ ಪೈಕಿ ಪದ್ಮನಾಭ ಭಟ್ (50) ಎಂಬವರು ಮೂಲತಃ ಕುಂದಾಪುರ ತಾಲೂಕಿನವರು. ಇಲ್ಲಿನ ಕುಂಬಾಶಿ ಗ್ರಾಮದ ಕೊರವಡಿ ಎಂಬಲ್ಲಿ ಅವರ ಹಿರಿಯರ ಮನೆ ಇದೆ.

ಪದ್ಮನಾಭ ಭಟ್ ಬೆಂಗಳೂರಿಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಣ ಪಡೆದವರು, ಅಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಚಾರಣಪ್ರಿಯರಾಗಿದ್ದ ಅವರು ಈ ಹಿಂದೆಯೂ ಗೆಳೆಯರೊಂದಿಗೆ ಅನೇಕ ಚಾರಣಗಳಲ್ಲಿ ಯಸ್ವಿಯಾಗಿ ಭಾಗವಹಿಸಿದ್ದರು. ಆದರೆ ಈ ಬಾರಿ ಸಹಸ್ರತಾಲ್ ಎಂಬಲ್ಲಿ ಚಾರಣ ಮುಗಿಸಿ ಹಿಂದಕ್ಕೆ ಬರುವಾಗ ಅಚಾನಕ್ಕಾಗಿ ಬೀಸಿದ ಭಾರಿ ಶೀತ ಗಾಳಿ ಮತ್ತು ಮಳೆಗೆ ಬಲಿಯಾಗಿದ್ದಾರೆ. ಅವರ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಬೆಂಗಳೂರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

ಪ್ರಸ್ತುತ ಊರಿನಲ್ಲಿರುವ ಮನೆಯಲ್ಲಿ ಸಂಬಂಧಿಕರಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ ಪದ್ಮನಾಭ್ ಭಟ್ ಅವರು ತಂದೆಯ ಊರು, ಮನೆಯನ್ನು ಮರೆತಿರಲಿಲ್ಲ. ಊರಿನ ಹರಿಹರ ದೇವಾಲಯ ಮತ್ತು ನಂದಿಕೇಶ್ವರ ದೈವಸ್ಥಾನಗಳಿಗೆ ಧನಸಹಾಯ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!