ಕನ್ನಡಪ್ರಭ ವಾರ್ತೆ ಮೈಸೂರು
ವಿಜಯನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪದ್ಮಶ್ರೀ ಡಾ. ದೇಜಗೌ ಅವರ 110ನೇ ಜಯಂತಿ ಅಂಗವಾಗಿ ದೇಜಗೌ ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು, ದೇಜಗೌ ಎರಡು ಚೇತನಗಳು ಕನ್ನಡ ಸಾಂಸ್ಕೃತಿಕ ರಾಯಭಾರಿಗಳು. ಕುವೆಂಪು ಅವರ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂಬ ಮಾತು ದೇಜಗೌ ಅವರಿಗೆ ತುಂಬಾ ಆಪ್ತವಾದದ್ದು, ಇವತ್ತಿಗೂ ಅಂತಹ ವ್ಯಕ್ತಿಯನ್ನು ಕಂಡಿಲ್ಲ. ಕನ್ನಡ ಅಧ್ಯಯನ ಸಂಸ್ಥೆಯ ರೂವಾರಿ, ಕುವೆಂಪು ವಿವಿಗೆ ಬುನಾದಿ, ಮುಕ್ತ ವಿವಿಗೆ, ಜಾನಪದ ವಿವಿಗೂ ತಳಹದಿಯಾದ ಮಹಾ ಶಿಲ್ಪಿ ದೇಜಗೌ. ಅವರು ಅನೇಕರ ಬದುಕನ್ನು ರೂಪಿಸಿದ ಸ್ಮರಣಿಯರು ಎಂದು ಅವರು ಹೇಳಿದರು.ದೇಜಗೌ ಅವರು ಒಬ್ಬ ಗದ್ಯ ಸಾಮ್ರಾಟ, ದೈತ್ಯ ಲೇಖಕ. ಭಾಷಾಂತರ ಎಂಬುದು ಮಹತ್ವದ ಕಲೆ ಎನ್ನುವುದು ಇವತ್ತು ನಮಗೆ ಗೊತ್ತಾಗಿದೆ. ಬೂಕರ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಷಾಂತರ ಆಧಾರ. ಭಾಷಾಂತರ ಕ್ಷೇತ್ರದಲ್ಲಿ ದೇಜಗೌ ಅವರು ಮುಂಚೂಣಿಯಲ್ಲಿ ಇದ್ದಿದ್ದಾಗಿ ಅವರು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್, ಡಾ.ಸಿ. ನಾಗಣ್ಣ, ಸಾಹಿತಿ ಡಾ. ಲತಾ ರಾಜಶೇಖರ್, ಡಾ. ರಾಜಶೇಖರ್, ಕಸಾಪ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಚಂದ್ರಶೇಖರ್, ಜಯಪ್ಪ ಹೊನ್ನಾಳಿ, ರಂಗನಾಥ ಮೈಸೂರು, ಸತೀಶ್ ಜವರೇಗೌಡ, ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಈ ಕಾರ್ಯಕ್ರಮವನ್ನು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸುವರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜಜ ಸ್ವಾಮೀಜಿ ಕಿರುಪುಸ್ತಕ ಬಿಡುಗಡೆಗೊಳಿಸುವರು. ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಾಸಭಾದ ಚಂದ್ರಶೇಖರಯ್ಯ, ಶಿವಮಲ್ಲಪ್ಪ, ಸಿದ್ದಲಿಂಗಸ್ವಾಮಿ, ಶಿವಲಿಂಗಪ್ಪ, ರೇಚಣ್ಣ ಇದ್ದರು.