ನರೇಗಾ ಯೋಜನೆಯಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಎಲ್ಲ ಕುಟುಂಬಸ್ಥರು ಸೆ.೩೦ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು
ಹನುಮಸಾಗರ: ಮನರೇಗಾ ಕೂಲಿಕಾರರ ಮನೆಗೆ ಕಾಯಕ ಬಂಧುಗಳು ಆಗಮಿಸಿದ ವೇಳೆ ತಮ್ಮ ಆಧಾರ ಕಾರ್ಡನ್ನು ನೀಡಿ, ಜಾಬ್ ಕಾರ್ಡಗೆ ಮೊಬೈಲ್ ಆ್ಯಫ್ ಮೂಲಕ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.
ಇಲ್ಲಿನ ಗ್ರಾ.ಪಂ.ಯಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಸೋಮವಾರ ಇ-ಕೆವೈಸಿ ನಿಮಿತ್ತ ಕಾಯಕ ಬಂಧುಗಳಿಗೆ ಮಾಹಿತಿ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಎಲ್ಲ ಕುಟುಂಬಸ್ಥರು ಸೆ.೩೦ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಈಗಾಗಲೇ ಕಾಯಕ ಬಂಧುಗಳಿಗೆ ಮಾಹಿತಿ ನೀಡಲಾಗಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಧ್ಯ ೭೦೫೯ ಸಕ್ರಿಯ ಕೂಲಿಕಾರರಿದ್ದಾರೆ. ಇ-ಕೆವೈಸಿ ಮಾಡಿಸದೇ ಇರುವಂತಹವರು ನಿಮ್ಮ ವಾರ್ಡ್ಗಳ ಕಾಯಕ ಬಂಧುಗಳು ಆಗಮಿಸಿದ ವೇಳೆ ಅಥವಾ ಗ್ರಾ.ಪಂ.ಆಗಮಿಸಿ ಇ-ಕೆವೈಸಿ ಮಾಡಿಸಬೇಕು ಎಂದರು.
ಗ್ರಾ.ಪಂ.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಕಾರ್ಯದರ್ಶಿ ಗ್ರೇಡ್- ೧ ಅಮರೇಶ ಕರಡಿ, ಬಿಎಫ್ಟಿ ಮಾರುತಿ ಸಾಳುಂಕಿ, ಎಸ್ಡಿಎ ವೀರನಗೌಡ ಪಾಟೀಲ್, ಗ್ರಾ.ಪಂ.ಸಿಬ್ಬಂದಿಗಳಾದ ಮಹಾಂತಯ್ಯ ಕೋಮಾರಿ, ಚಂದಯ್ಯ ಹಿರೇಮಠ, ವೀರೇಶ ಕೂರ್ನಾಳ, ಬಸವರಾಜ ಶಿವಸಿಂಪಿ, ಹನುಮೇಶ ನರೇಗಲ್, ಮೈಬೂಬ ಇಟಗಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.