ಚಾಂಗದೇವರ ಭಕ್ತರಿಗೆ ನೀರಿನ ಕೊರತೆ

KannadaprabhaNewsNetwork |  
Published : Apr 01, 2024, 12:48 AM IST
ನೀರು ಹರಿಸಿ | Kannada Prabha

ಸಾರಾಂಶ

ಮಲಪ್ರಭಾ ನದಿಯಿಂದ ಪ್ರತಿವರ್ಷ ನೀರು ಹರಿಸಲಾಗುತ್ತದೆ. ಇದರಿಂದಾಗಿ ಹೋಳಿ ಹುಣ್ಣಿಮೆ ಹಾಗೂ ಚಾಂಗ್‌ದೇವರ ಜಾತ್ರೆಯ ಭಕ್ತರಿಗೆ ನೀರಿನ ಕೊರತೆಯಾಗಲ್ಲ. ಆದರೆ ಈ ವರ್ಷ ಸರ್ಕಾರ ನೀರು ಹರಿಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಹಳ್ಳದಲ್ಲಿ ನೀರೇ ಇಲ್ಲ. ಇರುವ ಅಲ್ಪಸ್ವಲ್ಪ ನೀರಲ್ಲಿ ಭಕ್ತಗಣ ಸ್ನಾನ ಮಾಡಿ ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಯಮನೂರು ಚಾಂಗದೇವರ ಭಕ್ತರು ಈ ವರ್ಷ ನೀರಿಗಾಗಿ ಪರದಾಡುವಂತಾಗಿದೆ. ಚಾಂಗದೇವರ ಜಾತ್ರೆಯ ವೇಳೆ ಮಲಪ್ರಭಾ ನದಿಯಿಂದ ಬೆಣ್ಣಿಹಳ್ಳಕ್ಕೆ ನೀರು ಬಿಟ್ಟಿಲ್ಲ. ಇದರಿಂದಾಗಿ ಪರದಾಡುವಂತಾಗಿದೆ.

ಯಮನೂರು ಚಾಂಗದೇವರ ಜಾತ್ರೆ ಈ ಭಾಗದಲ್ಲಿ ಅತ್ಯಂತ ವಿಶೇಷತೆಯಿಂದ ಕೂಡಿದೆ. ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಕರ್ನಾಟಕದ ಕಲಬುರಗಿ, ಯಾದಗಿರಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ.

ಸರಿಸುಮಾರು ತಿಂಗಳ ಕಾಲ ಜಾತ್ರೆ ನಡೆಯುತ್ತಲೇ ಇರುತ್ತದೆ. ಈ ಭಾಗದಲ್ಲಿ ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿ ಚಾಂಗದೇವರ ದರ್ಶನ ಪಡೆದರೆ, ಚರ್ಮರೋಗ ಬರಲ್ಲ ಎಂಬ ನಂಬುಗೆ ಇಲ್ಲಿನ ಭಕ್ತರದು. ಹೀಗಾಗಿ ಚಾಂಗದೇವರ ಜಾತ್ರೆಗೆ ಬರುವ ಭಕ್ತರ ದಂಡು ಇಲ್ಲಿ ಸ್ನಾನ ಮಾಡುವುದು ಮಾಮೂಲಿ. ಈ ಕಾರಣಕ್ಕಾಗಿಯೇ

ಮಲಪ್ರಭಾ ನದಿಯಿಂದ ಪ್ರತಿವರ್ಷ ನೀರು ಹರಿಸಲಾಗುತ್ತದೆ. ಇದರಿಂದಾಗಿ ಹೋಳಿ ಹುಣ್ಣಿಮೆ ಹಾಗೂ ಚಾಂಗ್‌ದೇವರ ಜಾತ್ರೆಯ ಭಕ್ತರಿಗೆ ನೀರಿನ ಕೊರತೆಯಾಗಲ್ಲ. ಆದರೆ ಈ ವರ್ಷ ಸರ್ಕಾರ ನೀರು ಹರಿಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಹಳ್ಳದಲ್ಲಿ ನೀರೇ ಇಲ್ಲ. ಇರುವ ಅಲ್ಪಸ್ವಲ್ಪ ನೀರಲ್ಲಿ ಭಕ್ತಗಣ ಸ್ನಾನ ಮಾಡಿ ಹೋಗುತ್ತಿದೆ.

ಆಕ್ರೋಶ:

ಚಾಂಗದೇವರ ಜಾತ್ರೆಗೆ ಎಲ್ಲೆಲ್ಲಿಂದಲೂ ಜನರು ಬರುತ್ತಾರೆ. ಪ್ರತಿವರ್ಷ ಹಳ್ಳಕ್ಕೆ ನೀರು ಹರಿಸಲಾಗುತ್ತದೆ. ಆದರೆ ಈ ವರ್ಷ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಖಂಡನೀಯ. ಜಿಲ್ಲಾಡಳಿತ ಹಾಗೂ ಶಾಸಕರು ಕೂಡಲೇ ಬೆಣ್ಣಿಹಳ್ಳಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

ಭಕ್ತರಲ್ಲಿ ಮನವಿ:

ಇನ್ನು ಇಲ್ಲಿಗೆ ಬರುವ ಭಕ್ತರು ತಾವು ತೊಟ್ಟ ಬಟ್ಟೆಯ ತ್ಯಾಜ್ಯವನ್ನು ದಂಡೆಯ ಮೇಲೆ ಎಲ್ಲೆಂದರಲ್ಲಿ ಬಿಸಾಡಿರುತ್ತಾರೆ. ಬಟ್ಟೆ ಬರೆ ಸೇರಿದಂತೆ ಮತ್ತಿತರರ ತ್ಯಾಜ್ಯವನ್ನು ಬೆಣ್ಣಿಹಳ್ಳದ ದಂಡೆಯಲ್ಲೇ ಪ್ರತ್ಯೇಕ ಜಾಗದಲ್ಲಿಡುವ ಕೆಲಸವಾಗಬೇಕು. ಜತೆಗೆ ಇಲ್ಲಿನ ಸ್ಥಳೀಯ ಆಡಳಿತ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಮಹಾರಾಷ್ಟ್ರದ ಭಕ್ತ ರಮೇಶ ಎಂಬುವವರ ಒತ್ತಾಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಕಪ್ ವಾಹನ ಅಡ್ಡಗಟ್ಟಿ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಕೆ ದರೋಡೆ
ಪೋಕ್ಸೋ ಕಾಯ್ದೆ ಸರಿಯಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತೆಯರ ರಕ್ಷಣೆ