ಲಕ್ಷ್ಮೇಶ್ವರದ ಇಂದಿರಾ ಕ್ಯಾಂಟೀನ್‌ ಬಡವರಿಗೆ ವರದಾನ

KannadaprabhaNewsNetwork |  
Published : Aug 05, 2025, 01:30 AM IST
ಪೊಟೋ-ಪಟ್ಟಣದ ಇಂದಿರಾ ಕ್ಯಾಂಟೀನ್ನನಲ್ಲಿ ಊಟ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಬಡ ಜನತೆ.ಪೊಟೋ-ಪಟ್ಟಣದ ಇಂದಿರಾ ಕ್ಯಾಂಟೀನ್ ಹೊರಗೆ ಸರತಿ ಸಾಲಿನಲ್ಲಿ ನಿಂತು ಕೋಪನ್ ಪಡೆದುಕೊಂಡು ಹೋಗುತ್ತಿರುವ ದೃಶ್ಯ. | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಕಳೆದ ಎರಡು ದಿನಗಳ ಹಿಂದೆ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಬಡವರ, ಕೂಲಿ ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಪಾಲಿಗೆ ಹಸಿವು ನೀಗಿಸುವ ಮೂಲಕ ಅನ್ನಪೂರ್ಣೆಯಾಗಿರುವುದು ಸುಳ್ಳಲ್ಲ.

ಅಶೋಕ ಡಿ. ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಕಳೆದ ಎರಡು ದಿನಗಳ ಹಿಂದೆ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಬಡವರ, ಕೂಲಿ ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಪಾಲಿಗೆ ಹಸಿವು ನೀಗಿಸುವ ಮೂಲಕ ಅನ್ನಪೂರ್ಣೆಯಾಗಿರುವುದು ಸುಳ್ಳಲ್ಲ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ಗಳು ಖಂಡಿತವಾಗಿಯೂ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವುದು ಸ್ತ್ಯುತ್ಯಾರ್ಹ ಸಂಗತಿಯಾಗಿದೆ.

ಕೇವಲ ₹ 5ಗೆ ಉಪಾಹಾರ, ₹ 10ಗೆ ಊಟ ನೀಡುವ ಮೂಲಕ ಬಡವರ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿದೆ. ₹ 20 ನೀಡಿದಲ್ಲಿ ಎರಡು ಚಪಾತಿ ಅನ್ನ ಸಾಂಬಾರ ನೀಡುವ ಕಾರ್ಯದಲ್ಲಿ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ನಿರತರಾಗಿದ್ದಾರೆ. ಬೆಳಗ್ಗೆ ಮಾಡಿದ ಉಪಹಾರ ಬೇಗನೆ ಖಾಲಿಯಾಗಿ ಹಲವರು ಉಪಹಾರ ಇಲ್ಲದೆ ವಾಪಸ್ ಹೋಗುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ ಊಟಕ್ಕೆ ಸರತಿ ಸಾಲಿನಲ್ಲಿ ನಿಂತು ಊಟ ಸೇವನೆ ಮಾಡುತ್ತಿರುವ ದೃಶ್ಯ ಕಂಡು ಬಂದಿತು. ಆಲೂ ಪಲ್ಯ, ಸಾಂಬಾರು ಅನ್ನ ಸಾರು ಬಡವರ ಹೊಟ್ಟೆ ತುಂಬಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ.

ಪಟ್ಟಣಕ್ಕೆ ಬೇರೆ ಬೇರೆ ಗ್ರಾಮಗಳಿಂದ ಪಿಯು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ತಿಂಡಿ ತಿನ್ನದೆ ಬರುತ್ತಾರೆ. ಅವರಿಗೆ ಇಂದಿರಾ ಕ್ಯಾಂಟೀನ್‌ ಊಟ ಹಸಿದ ಹೊಟ್ಟೆ ತುಂಬಿಸುವ ಮೂಲಕ ಕಾರ್ಯ ಮಾಡುತ್ತಿರುವುದು ಕಂಡು ಬಂದಿತು.

ಲಕ್ಷ್ಮೇಶ್ವರ ಪಟ್ಟಣಕ್ಕೆ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಜನರು ಬೇರೆ ಬೇರೆ ಕೆಲಸಗಳಿಗೆ ಆಗಮಿಸುತ್ತಾರೆ. ಇಂತಹ ಜನರು ಹೊಟೇಲ್‌ಗಳಿಗೆ ಹೋಗಿ ಉಪಹಾರ ಹಾಗೂ ಊಟ ಮಾಡಿದಲ್ಲಿ ₹ 200 ಗಳಿಗೂ ಹೆಚ್ಚು ಹಣ ಖರ್ಚಾಗುತ್ತದೆ. ಇಷ್ಟು ಹಣ ಬರೀ ಊಟ, ಉಪಾಹಾರಗಳಿಗೆ ಖರ್ಚಾದಲ್ಲಿ ಇದು ಬಡವರ ಪಾಲಿಗೆ ತುಂಬಲಾರದ ನಷ್ಟವಾಗುತ್ತದೆ.

ಈಗ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್ ಇನ್ನಷ್ಟು ಹೆಚ್ಚು ಉಪಾಹಾರ ಹಾಗೂ ಊಟ ತಯಾರಿ ಮಾಡಿದಲ್ಲಿ ಹಸಿದ ಹೊಟ್ಟೆಯಿಂದ ವಾಪಾಸ್ ಹೋಗುವವರ ಸಂಖ್ಯೆ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎನ್ನುತ್ತಾರೆ ಸಾರ್ವಜನಿಕರು.ನಾವು ದೂರದ ಊರುಗಳಿಂದ ಇಲ್ಲಿಗೆ ಆಸ್ಪತ್ರೆಗೆ ಬಂದಿದ್ದೇವೆ. ಈಗ ಮಧ್ಯಾಹ್ನ ವೇಳೆಯಾಗಿದ್ದರಿಂದ ಊಟಕ್ಕೆ ಆಗಮಿಸಿದ್ದೇವೆ. ₹ 10 ಗಳಲ್ಲಿ ಊಟ ದೊರೆಯುತ್ತಿರುವುದು ಬಡವರ ಪಾಲಿಗೆ ಸಿಹಿ ಸಂಗತಿಯಾಗಿದೆ. ಊಟ ರುಚಿ ಕಟ್ಟಾಗಿದೆ. ಇದೆ ರೀತಿಯ ರುಚಿ ಮುಂದೆ ಇದ್ದಲ್ಲಿ, ಬಡವರು ಖಾನಾವಳಿ ಮರೆತು ಬಿಡುತ್ತಾರೆ ಎನ್ನುತ್ತಾರೆ ಸಂಕ್ಲಿಪುರ ಗ್ರಾಮಸ್ಥ ಈಶ್ವರಗೌಡ ಪಾಟೀಲ.ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನಿಜವಾಗಿಯೂ ಬಡವರ ಸ್ನೇಹಿಯಾಗಿದೆ. ರುಚಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವ ಮಾತಿಲ್ಲ. ಬಡವರು, ಕೂಲಿ ಕಾರ್ಮಿಕರು ಇದರ ಲಾಭ ಪಡೆದುಕೊಂಡಲ್ಲಿ ನಮ್ಮ ಶ್ರಮ ಸಾರ್ಥಕ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ