ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೆಲವಳಿ ವಸೂಲಿಯಿಂದ ರೌಡಿಗಳನ್ನು ಹುಟ್ಟುಹಾಕಿದಂತಾಗಿದೆ. ಕೊರಳಿಗೆ ಕೈ ಹಾಕಿ ಹಣ ವಸೂಲು ಮಾಡುವುದನ್ನು ಎಲ್ಲರೂ ನೋಡಿದ್ದಾರೆ ಎಂಬ ಸದಸ್ಯ ಮಹೇಶ್ ಪಲ್ಲವ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನೆಲವಳಿ ವಸೂಲಿಗೆ ಹರಾಜು ನಡೆಸಲಾಗಿತ್ತು. ಕಡಿಮೆ ಮೊತ್ತಕ್ಕೆ ಹರಾಜು ಆಗಿದ್ದರಿಂದ ಮತ್ತೆ ಮರು ಹರಾಜು ಕರೆಯಲಾಗಿತ್ತು. ಆದರೆ ಬೀದಿ ಬದಿ ವ್ಯಾಪಾರಿಗಳ ನೆಲವಳಿ ವಸೂಲಿ ಮಾಡಬಾರದು ಎಂಬ ಆದೇಶದಂತೆ ಇದೀಗ ನೆಲವಳಿ ವಸೂಲಿ ನಿಲ್ಲಿಸಲಾಗಿದೆ ಎಂದರು.ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಬೀದಿ ಬದಿಯಲ್ಲಿ ಮಾರುವ ಗೋಭಿ ಮಂಚೂರಿಗೆ ಹಾಕುತ್ತಿರುವ ಫೌಡರ್ ಬಳಕೆಯನ್ನು ಆದಷ್ಟು ಬೇಗ ನಿಲ್ಲಿಸಿ. ಅದರಿಂದ ಹಲವು ತೀವ್ರತರವಾದ ಕಾಯಿಲೆಯಾಗುವ ಸಂಭವವಿದೆ. ಜೊತೆಗೆ ನಗರದ ಹೋಟೆಲ್ ಗಳಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಎಂದರು.
ಸದಸ್ಯರ ಆರೋಪಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ನಿರಂಜನ್ ಉತ್ತರಿಸಿ ಈ ಮುಂಚೆ ಹೇಗಿತ್ತೋ ಗೊತ್ತಿಲ್ಲ. ಆದರೆ ಇತ್ತೀಚಿನ 2-3 ತಿಂಗಳಿನಿಂದ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ರಾತ್ರಿ ಪಾಳಿಯ ವೈದ್ಯರ ಉಪಸ್ಥಿತಿಯ ಬಗ್ಗೆ ಖುದ್ದು ನಾನೇ ಬಂದು ಪರಿಶೀಲಿಸುತ್ತಿದ್ದೇನೆ. ತುಂಬಾ ಮುಖ್ಯವಾದ ಮೆಡಿಸಿನ್ ಗಳಾದ ಹಾವು ಕಡಿತದ ಔಷಧಿ, ಹೃದಯಾಘಾತಕ್ಕೆ ಸಂಬಂದಿಸಿದ ಔಷಧಿಯ ಕೊರತೆ ಇಲ್ಲ. ಗರ್ಭಿಣಿ ಸ್ತ್ರೀಯರಿಗೆ ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಶುರು ಮಾಡಿದ್ದೇವೆ. ಹೆರಿಗೆ ವಿಭಾಗದಲ್ಲಿ ಹಣ ಕೇಳುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ರೋಗಿಗಳನ್ನು ನಿಲ್ಲಿಸಿಯೇ ಇಂಜೆಕ್ಷನ್ ನೀಡುವ ಪದ್ಧತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಕೋರಿಕೆಯಂತೆ ವಾರ್ಡ್ ನಂಬರ್ ಮೂರು ಮತ್ತು ಐದರಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ನಿವೇಶನ ಮಂಜೂರು ಮಾಡುವುದು, ಸಿದ್ದೇಶ್ವರ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಿದ್ದೇಶ್ವರ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಕಟ್ಟಡ ನಿರ್ಮಿಸಲು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಸಮುದಾಯ ಭವನ ನಿರ್ಮಾಣ ಮಾಡಲು, ತಾಲೂಕು ಸವಿತಾ ಸಮಾಜ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಲು ಸದರಿ ನಿವೇಶನಗಳ ಲಭ್ಯತೆ ಬಗ್ಗೆ ಪರಿಶೀಲಿಸಿ ಸರ್ಕಾರದ ಆದೇಶಗಳನ್ನು ಅನುಸರಿಸಿ ಮಂಜೂರು ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪೌರಾಯುಕ್ತ ಎ. ವಾಸಿಂ,ಸದಸ್ಯರಾದ ಈ. ಮಂಜುನಾಥ್,ವಿಠ್ಠಲ್ ಪಾಂಡುರಂಗ, ಗುಂಡೇಶ್ ಕುಮಾರ್, ಚಿತ್ರಜಿತ್ ಯಾದವ್, ವೈಪಿಡಿ ದಾದಾ ಪೀರ್, ಶಂಷುನ್ನಿಸಾ, ಗೀತಾ, ಜಗದೀಶ್, ನಾಮನಿರ್ದೇಶನ ಸದಸ್ಯರಾದ ಗಿರೀಶ್, ಶಿವಕುಮಾರ್ ಹಾಗೂ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಕ್ರಮ ಕಟ್ಟಡ ಖಾತೆ ರದ್ದು: