ವೀರಶೈವ ಸಂಘದಿಂದ ಅನ್ಯಾಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವೀರಶೈವ ಸಮುದಾಯ ಭವನಕ್ಕೆ ಪ್ರತ್ಯೇಕವಾದ ಟ್ರಸ್ಟ್ ಇದ್ದು, ಅದರಲ್ಲಿ ನಮಗೆ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ, ವೀರಶೈವ ಸಂಘದಲ್ಲಿ ನಮ್ಮ ಐದು ಕುಟುಂಬದ ಒಬ್ಬೊಬ್ಬ ಸದಸ್ಯರಿಗೆ ನಿರ್ದೇಶಕರ ಸ್ಥಾನ ಕೊಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ, ಗೌರವಾಧ್ಯಕ್ಷ ನೊಣವಿನಕೆರೆ ಶ್ರೀ ಮತ್ತು ರುದ್ರಯ್ಯ ಅವರಲ್ಲಿಯೂ ನಮ್ಮ ನೋವನ್ನು ತೋಡಿಕೊಂಡಿದ್ದೇವೆ’ ಎಂದು ಹೇಳಿದರು.
‘ಸ್ಥಳದ ದಾನಿಗಳನ್ನೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿರುವ ಈ ಸಂಘದ ನಡವಳಿಕೆ ನಮಗೆ ಬಹಳ ನೋವನ್ನುಂಟು ಮಾಡಿದೆ. ನಮ್ಮ ತಂದೆಯವರು ನಮಗೆ ನೀಡಿರುವ ನಿವೇಶನಕ್ಕೆ ನಾವು ಐವರು ಗಂಡು ಮಕ್ಕಳು ಪಾಲುದಾರರು, ನಾವು ಅದನ್ನು ಪ್ರಶ್ನಿಸುತ್ತಿಲ್ಲ, ನಮ್ಮ ಕುಟುಂಬಗಳಿಗೆ ಒಂದೊಂದು ಸದಸ್ಯತ್ವ ಸ್ಥಾನವನ್ನು ಕೊಡಿ ಎಂದು ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಸ್ಪಂದಿಸದಿದ್ದಲ್ಲಿ ನಾವು ಮುಂದಿನ ನಡೆಯ ಬಗ್ಗೆ ಚಿಂತಿಸಬೇಕಾಗುತ್ತದೆ, ಒಂದೇ ಕುಟುಂಬದ ಏಳು ಜನರನ್ನು ಸದಸ್ಯರನ್ನಾಗಿ ತೆಗೆದುಕೊಂಡಿದ್ದಾರೆ, ಇದು ಯಾವ ನಿಯಮ, ಈವರೆಗೂ ಸರ್ವ ಸದಸ್ಯರ ಸಭೆ ಕೂಡ ನಡೆದಿಲ್ಲ, ಮೂರು ನಾಲ್ಕು ಜನ ಕುಳಿತು ಅವರೇ ಪದಾಧಿಕಾರಿಗಳ ಆಯ್ಕೆ ತೀರ್ಮಾನ ಮಾಡಿಕೊಳ್ಳುತ್ತಾರೆ’ ಎಂದು ದೂರಿದರು.