ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಸಮಿತಿ ಸಹಯೋಗದಲ್ಲಿ ಉರ್ದು ಪ್ರೌಢಶಾಲಾ ಅಂಗಳದಲ್ಲಿ ನ.9ರಂದು ನಡೆದ ಸಾಹಿತ್ಯ ಕಮ್ಮಟ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಕನ್ನಡ ವಾಹಿನಿ ನೋಡುವ, ಮಾತನಾಡುವ ಅವಕಾಶ ಮಾಡಲು ಪೋಷಕರು ಸಹಕರಿಸಬೇಕಿದೆ ಎಂದು ಹೇಳಿದರು.
ಉಪನ್ಯಾಸಕರು ಹಾಗೂ ರಂಗಕರ್ಮಿಗಳಾದ ಡಾ.ಜಿ.ಆರ್.ಲವ ಮಾತನಾಡಿ, ಕಥೆ ಎಂದರೆ ತಾನು ಬದುಕುವ ಲೋಕದ ಮರುಸೃಷ್ಠಿಯೂ ಹೌದು. ಲೋಕದ ವ್ಯಾಖ್ಯಾನವು ಹೌದು. ಕಥೆಗಾರನಿಗೆ ಲೋಕವನ್ನು ಪ್ರಜ್ಞೆಯಿಂದ ಗ್ರಹಿಸುವ ಜ್ಞಾನಬೇಕು ಎಂದು ಹೇಳಿದರು.ಮನುಷ್ಯ ತನ್ನ ಜೀವನ ಅನುಭವಗಳೂ ಕತೆಗೆ ವಸ್ತುವಾಗಿ ಪಾತ್ರಗಳಾಗಿ, ಘಟನೆಗಳಾಗಿ, ಜೀವನಾನುಭವದೊಂದಿಗೆ ಅಭಿವ್ಯಕ್ತಿವಾಗುತ್ತದೆ. ಕಥೆಗಾರರಿಗೆ, ತಾಯಿಯೂ, ತಂದೆಯ ಗುರುಗಳೂ, ಊರ ಪರಿಸರವೋ, ಘಟನೆಯೋ, ಸಾವು, ಬದುಕಿನ ಕಷ್ಟ ಸುಖಗಳೂ ಸೇರಿದಂತೆ ಕಥೆ ಕಟ್ಟುವ ದಾರಿಯನ್ನು ಕಂಡುಕೊಳ್ಳಬಹುದು ಎಂದು ಡಾ.ಜಿ.ಆರ್.ಲವ ವಿವರಿಸಿದರು.