ಮೊಬೈಲ್ ಹಾವಳಿಯಿಂದ ಭಾಷೆ, ಸಾಹಿತ್ಯ ಕುಂಠಿತ

KannadaprabhaNewsNetwork |  
Published : Dec 02, 2024, 01:15 AM IST
ಕಸಪ ದತ್ತಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮ- | Kannada Prabha

ಸಾರಾಂಶ

ಮೊಬೈಲ್ ಹಾವಳಿಯಿಂದ ಭಾಷೆ, ಸಾಹಿತ್ಯ ಬೆಳೆಯದೇ ಕುಂಠಿತವಾಗುತ್ತಿದೆ ಎಂದು ಎಸ್ ಐ. ಪ್ರಶಾಂತ ಕುಮಾರ ಹೇಳಿದರು.ಶಿರಾಳಕೊಪ್ಪ ಕಸಪ ಆಶ್ರಯದಲ್ಲಿ ಸ.ಪ.ಪೂ ಕಾಲೇಜಿನ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ದತ್ತಿ ಕಾರ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿರಾಳಕೊಪ್ಪ: ಮೊಬೈಲ್ ಹಾವಳಿಯಿಂದ ಭಾಷೆ, ಸಾಹಿತ್ಯ ಬೆಳೆಯದೇ ಕುಂಠಿತವಾಗುತ್ತಿದೆ ಎಂದು ಎಸ್ ಐ. ಪ್ರಶಾಂತ ಕುಮಾರ ಹೇಳಿದರು.

ಶಿರಾಳಕೊಪ್ಪ ಕಸಪ ಆಶ್ರಯದಲ್ಲಿ ಸ.ಪ.ಪೂ ಕಾಲೇಜಿನ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ದತ್ತಿ ಕಾರ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ವಿದ್ಯಾರ್ಥಿಗಳು ಕನ್ನಡ ಭಾಷೆ ಬೆಳಸಲು ಆಸಕ್ತಿ ವಹಿಸಬೇಕು. ಇತರ ಭಾಷೆಯ ವ್ಯಾಮೋಹ ಹಾಗೂ ಮೊಬೈಲ್ ನಿಂದ ದೂರವಿದ್ದಲ್ಲಿ ನಿಮ್ಮ ಬೆಳವಣಿಗೆ ಜೊತೆಗೆ ಕನ್ನಡವನ್ನು ಬೆಳಸಲು ಸಹಕಾರಿ ಆಗಲಿದೆ ಎಂದರು.

ಸೊರಬ ಸರ್ಕಾರಿ ಸ.ಪ.ಪೂ ಕಾಲೇಜಿನ ಪ್ರಾಧ್ಯಾಪಕ ಶಂಕರ್ ನಾಯಕ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ದಾಸರಕೊಡುಗೆ ಅಪಾರವಾದದ್ದು. ಸಂಗೀತ ಪಿತಾಮಹ ಪುರಂದರ ದಾಸರು ಮತ್ತು ಕನಕದಾಸರು ತಮ್ಮ ಕೀರ್ತನೆಗಳಿಂದ ನಾಡಿನಲ್ಲಿ ಪ್ರಖ್ಯಾತರಾಗಿ ಉಳಿದಿದ್ದು, ಕೀತರ್ನೆಗಳು ಸದಾ ಎಲ್ಲ ಜನಾಂಗದವರ ಮನದಲ್ಲಿ ಉಳಿಯುವಂತೆ ಹಾಡಿದ್ದಾರೆ ಎಂದರು.

ಕಾರ್ಯಕ್ರಮದ ಶಾಲೆಯ ಮುಖ್ಯೋಪಾಧ್ಯಾಯ ಪಿ. ನಾಗರಾಜಪ್ಪ, ಶಿಕಾರಿಪುರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ವೈ.ಎಸ್ ಮಾತನಾಡಿದರು.

ವೇದಿಕೆ ಮೇಲೆ ಶಾಲಾ ಸಮಿತಿ ಅಧ್ಯಕ್ಷ ಬಸವರಾಜ್ ಅಕ್ಕಿ, ಶಿರಾಳಕೊಪ್ಪ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸುರಹೊನ್ನೆ, ನಿವೃತ್ತ ಸೈನಿಕ ಕ್ರಷ್ಣಮೂರ್ತಿ, ಶಾಲಾ ಸಮಿತಿ ಸದಸ್ಯರಾದ ಪರಮೇಶ್ವರಪ್ಪ, ಹಾಲೇಶಪ್ಪ, ಆಶಾ ಮಂಜುನಾಥ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ರಂಜಿತಾ ಕಾಯರ್ಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ