ಕನಕಪುರ: ಭಾರತೀಯ ವಕೀಲರ ಪರಿಷತ್ತಿನ ಛೇರ್ಮನ್ ಹಾಗೂ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿಯವರ ಮೇಲಿನ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ಸಿ.ಚನ್ನೇಗೌಡ ನೇತೃತ್ವದಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ನಗರದ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಎ.ಸಿ. ಚನ್ನೇಗೌಡ, ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಕೀಲರ ಜೀವಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ, ಇಂತಹ ಘಟನೆಗಳಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸ್ದರು.
ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಸಿದಾರ್ಥ್, ಕಾರ್ಯದರ್ಶಿ ಸಿ.ಎಸ್.ನಾರಾಯಣ್, ಖಜಾಂಚಿ ಟಿ.ಎಸ್.ಸಾಗರ್, ಹಿರಿಯ ವಕೀಲರಾದ ರಾಮಚಂದ್ರು, ಎಸ್.ವಿ.ವೀರಪ್ಪ, ಕೆ.ಬಿ.ರಾಜು, ಜಯರಾಮೇಗೌಡ, ಕಾಮೇಶ್, ಟಿ.ಎಸ್.ಅನಿತಾ, ಸ್ವಾಮಿ ತಾಲೂಕಿನ ಎಲ್ಲಾ ವಕೀಲರು ಪಾಲ್ಗೊಂಡಿದ್ದರು.