
ಕನ್ನಡಪ್ರಭ ವಾರ್ತೆ, ತುಮಕೂರು
ನಗರದಲ್ಲಿ ಬಿ.ಕೃಷ್ಣಪ್ಪ ಪ್ರತಿಷ್ಠಾನ, ಒಳ ಮೀಸಲಾತಿ ಹೋರಾಟ ಸಮಿತಿ, ಜಿಲ್ಲಾ ಮಾದಿಗ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಹಾಗೂ ಒಳ ಮೀಸಲಾತಿ ಸಾಮಾಜಿಕ ನ್ಯಾಯ ಕುರಿತು ವಿಚಾರ ಸಂಕಿರಣ ದಲ್ಲಿ ಮಾತನಾಡಿದರು.
ದಲಿತ ಚಳವಳಿ ಎಲ್ಲ ಸಮುದಾಯವನ್ನು ಒಳಗೊಂಡಿತ್ತು, ಆದರೆ ಇಂದಿನ ಕಾಲಮಾನದಲ್ಲಿ ದಲಿತ ಚಳವಳಿ ವಿಘಟನೆಗೆ ಒಳಗಾಗಿ ಎಡ-ಬಲ ಎನ್ನುವಂತಾಗಿದೆ. ಇದು ದಲಿತ ಚಳವಳಿಗೆ ಅಪಾಯವನ್ನು ತರಲಿದೆ. ಮೀಸಲಾತಿ ವಿರೋಧಿಸುತ್ತಿದ್ದ ಗುಂಪುಗಳು ಇಂದು ಮೀಸಲಾತಿಯನ್ನು ವಿರೋಧಿಸುತ್ತಿಲ್ಲ ಎಂದರೆ ಅವರೆಲ್ಲ ಒಪ್ಪಿಕೊಂಡಿದ್ದಾರೆ ಎಂದಲ್ಲ ಮೀಸಲಾತಿ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಸಮಾನ ಹಂಚಿಕೆಯಷ್ಟೇ ಪಡೆದಿರುವ ಮೀಸಲಾತಿಯನ್ನು ಹಂಚಿಕೊಳ್ಳಲು ಕರುಣೆ, ಸಾಮರಸ್ಯ, ಸಮಾನತೆ ಇರಬೇಕು ಇಂದು ಮೀಸಲಾತಿಗೆ ಒಳಗಿನಿಂದಲೇ ಕಂಟಕವಿದೆ ಎಂದರು.ಒಳ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಎಲ್ಲ ಸಮಿತಿಗಳು ಶೇ.6ರಷ್ಟು ಮೀಸಲಾತಿ ನೀಡಿವೆ ಅದಕ್ಕೆ ಯಾರು ವಿರೋಧ ವ್ಯಕ್ತಪಡಿಸಿಲ್ಲ, ಮಾದಿಗರು ಹೆಚ್ಚಿಗೆ ಮೀಸಲಾತಿ ಕೇಳಿಲ್ಲ, ಯಾವ ಮಾನದಂಡ ಬಳಸಿದರೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದು ಸತ್ಯ, ಅವರಿಗೆ ನ್ಯಾಯಯುತ ಅವಕಾಶ ಕೊಡಬೇಕು ಎಂದರು.
ಕೇವಲ ದಲಿತ ಚಳವಳಿಯಷ್ಟೇ ಅಲ್ಲ, ಅಹಿಂದ ಸಮುದಾಯ ಒಡೆದು ಚೂರಾಗಿದೆ. ದಲಿತ ಸಮುದಾಯ, ಹಿಂದುಳಿದ, ಅಲ್ಪಸಂಖ್ಯಾತರು ಸಹ ವಿಘಟನೆಗೊಳಗಾಗಿವೆ. ಮುಂದಿನ ರಾಜಕೀಯ ತೀರ್ಮಾನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಗೊತ್ತಿಲ್ಲ, ಯುವ ಸಮೂಹದ ಅಸಮಾಧಾನ ನಿರ್ಣಾಯಕವಾಗಲಿದೆ ಎಂದರು.
ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ , ಒಳ ಮೀಸಲಾತಿ ಹೋರಾಟ ಸಮಿತಿಯ ಬಸವರಾಜ್ ಕೌತಾಳ್ ಮಾತನಾಡಿದರು.