ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಕಲಿಯಿರಿ: ಎಸ್‌.ಎಸ್.ಜಗದೀಶ್‌ ಸಲಹೆ

KannadaprabhaNewsNetwork |  
Published : Jun 25, 2025, 01:18 AM IST
ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಸ್ಕೂಲ್ ಬ್ಯಾಗ್ ಹಾಗೂ ಇತರ ಶಾಲಾ ಪರಿಕರಗಳನ್ನು ವಿತರಿಸಲಾಯಿತು.ಎಸ್‌.ಎಸ್.ಜಗದೀಶ್, ದಾನಿಗಳಾದ ಪುಟ್ಟಸ್ವಾಮಿ, ಡಿ.ರಮೇಶ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರಸರ್ಕಾರ ಶಾಲೆಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಿರುವುದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಕಲಿಕೆಯ ಕಡೆ ಗಮನ ಹರಿಸಿದಾಗ ಮಕ್ಕಳು ಉತ್ತಮ ನಾಗರಿಕರಾಗಬಹುದು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.

ಸೀನಿಯರ್‌ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಸೂಸಲವಾನಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಪರಿಕರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರ ಶಾಲೆಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಿರುವುದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಕಲಿಕೆಯ ಕಡೆ ಗಮನ ಹರಿಸಿದಾಗ ಮಕ್ಕಳು ಉತ್ತಮ ನಾಗರಿಕರಾಗಬಹುದು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.

ಸೋಮವಾರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ತಾಲೂಕಿನ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಕ್ಕಳಿಗೆ ಸ್ಕೂಲ್ ಬ್ಯಾಗ್, ಛತ್ರಿ, ನೋಟ್‌ ಬುಕ್, ಜಾಮಿಟ್ರಿ ಬಾಕ್ಸ್ ಹಾಗೂ ಇತರೆ ಶಾಲಾ ಪರಿಕರ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೀನಿಯರ್ ಚೇಂಬರ್‌ ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇಂದು ಸೂಸಲ ವಾನಿಯ ಸರ್ಕಾರಿ ಶಾಲೆ 30 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದೇವೆ. ಈ ಎಲ್ಲಾ ಸೌಲಭ್ಯ ಉಪಯೋಗಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಜೇಸಿ ವಾಣಿಯಂತೆ ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬ ವಾಕ್ಯದಂತೆ ಶ್ರದ್ಧಾ ಭಕ್ತಿ ಯಿಂದ ಶಿಕ್ಷಣ ಕಲಿತು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬಾಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಕಲಿಕಾ ಸಾಮಾಗ್ರಿ ಕೊಡುಗೆಯಾಗಿ ನೀಡಿದ ದಾನಿ ಬೆಂಗಳೂರಿನ ಎಂ.ಟಿ.ಆರ್.ಕಂಪನಿ ಉದ್ಯೋಗಿ ಸೂಸಲ ವಾನಿ ಎಸ್‌.ಎಸ್.ಪುಟ್ಟಸ್ವಾಮಿ ಹಾಗೂ ಇನ್ನೊಬ್ಬ ದಾನಿ ಸೀನಿಯರ್ ಚೇಂಬರ್ ನ ಉಪಾಧ್ಯಕ್ಷ ಡಿ.ರಮೇಶ್ , ಕಾರ್ಯ ದರ್ಶಿ ಕೆ.ಎಂ.ಕೃಷ್ಣಮೂರ್ತಿ, ನಿರ್ದೇಶಕರಾದ ಕುಮಾರ್ ಜಿ. ಶೆಟ್ಟಿ,ಜಿ.ದಿವಾಕರ, ಡಿ.ನಾಗೇಶಗೌಡ,ಎಂ.ಆರ್.ಸುಂದರೇಶ್, ಶಾಲೆಯ ಎಸ್‌.ಡಿಎಂಸಿ ಅಧ್ಯಕ್ಷ ನಾಗೇಶ್, ಮುಖ್ಯ ಶಿಕ್ಷಕ ರಾಜಪ್ಪ, ಸಹ ಶಿಕ್ಷಕಿ ಪ್ರಮೀಳಾ ಇದ್ದರು.

-- ಬಾಕ್ಸ್ --

ಬಾಲಕಿಗೆ ನೆರವು

ಇದೇ ಸಂದರ್ಭದಲ್ಲಿ ಅನಾರೋಗ್ಯ ಪೀಡಿತಳಾದ ರಾವೂರು ಗ್ರಾಮದ ರಮೇಶ ಎಂಬುವರ ಪುತ್ರಿ 6 ವರ್ಷದ ನಿಹಾರಿಕ ಎಂಬ ಪುಟ್ಟ ಬಾಲಕಿಗೆ ಪ್ರತಿ ದಿನ ಅಗತ್ಯವಾಗಿ ಬೇಕಾಗಿರುವ ಬಿಪಿ ಚೆಕಪ್ ಮಾಡುವ ಯಂತ್ರವನ್ನು ಸೀನಿಯರ್ ಚೇಂಬರ್‌ ನಿಂದ ಕೊಡುಗೆಯಾಗಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ