ಶ್ರದ್ಧೆಯಿಂದ ಪಾಠ ಕಲಿತು ಗುರಿ ಸಾಧಿಸಿ

KannadaprabhaNewsNetwork |  
Published : Jul 11, 2025, 01:47 AM IST
ಗದಗ ಜೇಸಿ ಪ್ರೌಢಶಾಲೆಯಲ್ಲಿ ಗುರುವಾರ ಗುರುಪೂರ್ಣಿಮೆಯ ನಿಮಿತ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರು ಕಲಿಸಿ ಕೊಟ್ಟ ಪಾಠ ಶ್ರದ್ಧೆ ಭಕ್ತಿಯಿಂದ ಕಲಿತು ಗುರಿ ಸಾಧನೆ ಮಾಡುವಂತವರಾಗಬೇಕು

ಗದಗ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಜನನಿಯಿಂದ ಪಾಠ ಕಲಿತ ನಾವೇ ಧನ್ಯರು, ನಮಗೆಲ್ಲ ಮೊದಲ ಗುರು ತಾಯಿ, ಆ ತಾಯಿಯಿಂದ ಕಲಿತ ಪಾಠ ನಮ್ಮ ಭವಿಷ್ಯಕ್ಕೆ ಮೈಲಿಗಲ್ಲು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರು ಕಲಿಸಿ ಕೊಟ್ಟ ಪಾಠ ಶ್ರದ್ಧೆ ಭಕ್ತಿಯಿಂದ ಕಲಿತು ಗುರಿ ಸಾಧನೆ ಮಾಡುವಂತವರಾಗಬೇಕು ಎಂದು ಪ್ರಾ.ಜಯಶ್ರೀ ಮಡಿವಾಳರ ಹೇಳಿದರು.

ನಗರದ ಜೇಸಿ ಪ್ರೌಢಶಾಲೆಯಲ್ಲಿ ಗುರುವಾರ ಗುರುಪೂರ್ಣಿಮೆಯ ನಿಮಿತ್ತ 10ನೇ ತರಗತಿಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಹೇಶ ಸಂದಿಗೋಡ, ದಾನಮ್ಮಾ ತೆಗ್ಗಿನಕೇರಿ, ಭುವನೇಶ್ವರಿ ಸಿಂಗಟಾಲೂರ, ಜ್ಯೋತಿ ಹೇರಲಗಿ, ರೇಣುಕಾ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಕುಲಕರ್ಣಿ, ಶ್ರೇಯಾ ಹಿರೇಮಠ, ಅಯಾನ ತಹಸೀಲ್ದಾರ ಮಾತನಾಡಿದರು.

ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತರುಣ ಬೇವಿನಮರದ ಸ್ವಾಗತಿಸಿದರು. ಕೋಮಲ ಅಗಸಿಮನಿ ನಿರೂಪಿಸಿದರು. ವೈಭವಿ ಸರಗಣಾಚಾರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌