ಜಾತಿ, ಸಂಘರ್ಷ ಬಿಡಿ, ಹಿಂದೂಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿ: ಪ್ರವೀಣ ತೊಗಡಿಯಾ

KannadaprabhaNewsNetwork |  
Published : Jun 17, 2025, 01:09 AM IST
16ಕೆಪಿಎಳ್28 ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿರುವ ಪಾನಘಂಟಿ ಕಲ್ಯಾಣಮಂಟಪದಲ್ಲಿ ಹಿಂದೂಗಳ ಸಮಾವೇಶದಲ್ಲಿ ಪ್ರವೀಣ ತೊಗಡಿಯಾ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಹಿಂದೂಗಳ ಜನಸಂಖ್ಯೆ ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ತಾವೆಲ್ಲರೂ ಸಿದ್ಧವಾಗಬೇಕು. ಜನಸಂಖ್ಯೆ ನಿಯಂತ್ರಣ ಮಾಡುವುದಾದರೇ ಎಲ್ಲರಿಗೂ ಒಂದೇ ಎನ್ನುವ ಕಾನೂನು ತರಬೇಕು. ಆದರೆ, ಅದು ಈಗ ಆಗುತ್ತಿಲ್ಲ. ಹೀಗಾಗಿ, ನೀವೆಲ್ಲ ನಾಲ್ಕಾರು ಮಕ್ಕಳನ್ನು ಹೆರಬೇಕು.

ಕೊಪ್ಪಳ:

ಜಾತಿ, ಜಾತಿಗಳ ಮಧ್ಯದ ಸಂಘರ್ಷ ಬಿಟ್ಟು ಹಿಂದೂಗಳೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕೆಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಡಿಯಾ ಹೇಳಿದರು.

ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದೂಗಳ ಸಮಾವೇಶದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಏನಾಗುತ್ತಿದೆ ಎನ್ನುವುದು ಕಣ್ಣೆದುರಿಗೆ ಇದೆ. ಇಷ್ಟಾದರೂ ನಾವು ಒಗ್ಗಟ್ಟು ಪ್ರದರ್ಶನ ಮಾಡದಿದ್ದರೇ ಹೇಗೆ ಎಂದು ಪ್ರಶ್ನಿಸಿದರು.

ಹಿಂದೂಗಳ ಜನಸಂಖ್ಯೆ ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ತಾವೆಲ್ಲರೂ ಸಿದ್ಧವಾಗಬೇಕು. ಜನಸಂಖ್ಯೆ ನಿಯಂತ್ರಣ ಮಾಡುವುದಾದರೇ ಎಲ್ಲರಿಗೂ ಒಂದೇ ಎನ್ನುವ ಕಾನೂನು ತರಬೇಕು. ಆದರೆ, ಅದು ಈಗ ಆಗುತ್ತಿಲ್ಲ. ಹೀಗಾಗಿ, ನೀವೆಲ್ಲ ನಾಲ್ಕಾರು ಮಕ್ಕಳನ್ನು ಹೆರಬೇಕು ಎಂದು ಮನವಿ ಮಾಡಿದರು.

ಹಿಂದೂಗಳಿಗೆ ಸಮಸ್ಯೆಯಾದರೇ ಸ್ಪಂದಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಹೆಲ್ಪ್‌ಲೈನ್ ಮಾಡಿದ್ದೇವೆ. ಯಾರು ಸಹ ಆತಂಕಪಡುವ, ಎದೆಗುಂದುವ ಅಗತ್ಯವಿಲ್ಲ. ಎಲ್ಲರೂ ಒಗ್ಗೂಡಿ, ಹಿಂದೂ ಸಮಾಜವನ್ನು ಸಂಘಟಿಸಬೇಖಿದೆ. ಇದಕ್ಕೆ ನೀವೆಲ್ಲ ಕೈಜೋಡಿಸಿ ಎಂದರು.

ಬಾಂಗ್ಲಾದೇಶ ಹಾಗೂ ಈ ಹಿಂದೇ ಕಾಶ್ಮೀರದಲ್ಲಿ ಹಿಂದೂಗಳಿಗೆ ಏನಾಗಿದೆ ಎಂದು ಎಲ್ಲರೂ ತಿಳಿದಿದ್ದೇವೆ. ನೈಜತೆ ಈಗಿರುವಾಗ ನಾವು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಜಾತಿ-ಜಾತಿಗಳ ನಡುವೆ ಸಂಘರ್ಷ ಸರಿಯಲ್ಲ. ಎಲ್ಲರೂ ಒಂದೇ ಎನ್ನುವ ಭಾವನೆ ಹೊಂದಬೇಕೆಂದು ಕರೆ ನೀಡಿದರು.

ಈ ವೇಳೆ ಹಿರಿಯರಾದ ಡಾ. ಕೆ.ಜಿ. ಕುಲಕರ್ಣಿ, ಆರ್.ಬಿ. ಪಾನಘಂಟಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''