ಕನ್ನಡಪ್ರಭ ವಾರ್ತೆ ಹೊನ್ನಾವರ
ಇದು ಕಷ್ಟದ ಯುಗ. ಉತ್ತಮರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮಾತೃ ಸಂಸ್ಥೆ ತಾರುಣ್ಯದಲ್ಲಿ ಇರಲು ಪೂರ್ವ ವಿದ್ಯಾರ್ಥಿ ಸಂಘ ಜೊತೆಯಾಗಬೇಕು ಎಂದು ನುಡಿದರು.
ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಂಪಿಇ ಸೊಸೈಟಿ ಉಪಾಧ್ಯಕ್ಷ ನಾಗರಾಜ ಕಾಮತ, ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ, ಸದಸ್ಯ ರಾಜು ಭಂಡಾರಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ, ಕಾರ್ಯದರ್ಶಿ ಡಿ.ಎಲ್. ಹೆಬ್ಬಾರ, ಪಿ.ಎಂ. ಹೊನ್ನಾವರ, ಡಾ. ಶಿವರಾಮ ಶಾಸ್ತ್ರಿ, ಸತೀಶ ಭಟ್ಟ, ಕಾವೇರಿ ಮೇಸ್ತ, ಉದ್ಯಮಿ ಪ್ರೀತಮ್ ಶೇಟ್, ಪದವಿ ಕಾಲೇಜು ಪ್ರಾಚಾರ್ಯ ಡಾ. ಜಿ.ಎನ್. ಭಟ್ಟ, ಪದವಿ ಪೂರ್ವ ಕಾಲೇಜು ಹಂಗಾಮಿ ಪ್ರಾಚಾರ್ಯ ಡಾ. ರಾಜು ಮಾಳಗಿಮನೆ, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ, ಎಸ್.ಜಿ. ಹೆಗಡೆ ಭಾಗವಹಿಸಿದ್ದರು.ಇದಕ್ಕೂ ಮೊದಲು ಬೆಳಗ್ಗಿನ ಅವಧಿಯಲ್ಲಿ ವಿಶ್ರಾಂತ ಉಪನ್ಯಾಸಕರು, ವಿವಿಧ ಸಾಧನೆ ಮಾಡಿದ ಪೂರ್ವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಪೂರ್ವ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಈಗಿನ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುತ್ತಾ ಹಳೆಯ ದಿನಗಳನ್ನು ಮೆಲಕು ಹಾಕಿದರು. ಸಂಗೀತ ಉಪನ್ಯಾಸಕಿ ಸಂಗೀತ ನಾಯ್ಕ ಪ್ರಾರ್ಥಿಸಿದರು.ಡಾ.ಡಿ.ಎಲ್.ಹೆಬ್ಬಾರ್ ಸ್ವಾಗತಿಸಿದರು. ಪ್ರಕಾಶ್ ಕಾಮತ್ ಹಾಗೂ ಉಪನ್ಯಾಸಕ ವಿನಾಯಕ್ ಭಟ್ ಅತಿಥಿ ಪರಿಚಯಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ನಂತರ ಪೂರ್ವ ವಿದ್ಯಾರ್ಥಿಗಳಿಂದ ಯಕ್ಷಗಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.