ಚಿರತೆ ದಾಳಿ: ಭಯಭೀತರಾದ ಗಂಗನದೊಡ್ಡಿ ಗ್ರಾಮಸ್ಧರು

KannadaprabhaNewsNetwork |  
Published : Dec 22, 2024, 01:33 AM IST
ಕನ್ನಡಪ್ರಭ ವಾರ್ತೆ ಹನೂರು ಚಿರತೆ ದಾಳಿ ಕುರಿ ಬಲಿಯಾಗಿರುವ ಘಟನೆ ಗಂಗನ ದೊಡ್ಡಿ ಗ್ರಾಮದಲ್ಲಿ ಜರುಗಿದೆ....ಈ ಘಟನೆಯಿಂದ ಭಯಭೀತರಾದ ಗ್ರಾಮಸ್ಥರು ರೈತರು... ನಹನೂರು ತಾಲೂಕಿನ ಗಂಗನ್ ದೊಡ್ಡಿ ಗ್ರಾಮದ ದತ್ತೆಶ್ ಕುಮಾರ್ ಜಮೀನಿನ ಬಳಿ ಇಂದು ಮಧ್ಯಾಹ್ನ ಮಂದೇ ಕುರಿಗಳನ್ನು ಮೇಯಿಸುತ್ತಿದ್ದಾಗ ಅಟತ್ತನೆ ದಾಳಿ ನಡೆಸಿದ ಚಿರತೆ ಕುರಿಯನ್ನು ಕಚ್ಚಿ ಒತ್ತೊಯ್ಯುವ ಸಂದರ್ಭದಲ್ಲಿ ಅಲ್ಲೇ ಇದ್ದಂತ ಕುರಿಗಾಹಿಗಳು ಕಿರುಚಾಡುತ್ತಿದ್ದನ್ನು ನೋಡಿದಾಗ ಚಿರತೆ ಕುರಿಯನ್ನು ಬಿಟ್ಟು ಕಬ್ಬಿನ ತೋಟಕ್ಕೆ ಪರಾರಿಯಾಗಿದೆ ಎನ್ನಲಾಗಿದೆ...ಕುರಿ ಬಲಿ ಪಡೆದ ಚಿರತೆ : ಕಳೆದ ಹಲವಾರು ತಿಂಗಳ ಹಿಂದೆ ಚಿರತೆ ಈ ಭಾಗದಲ್ಲಿ ಸಾಕುಪ್ರಾಣಿಗಳನ್ನು ಕೊಂದು ನಾಪತ್ತೆಯಾಗಿದ್ದ ಚಿರತೆ ಮತ್ತೆ ಇಂದು ಮಧ್ಯಾಹ್ನ ಕುರಿಯನ್ನು ಮೇಯಿಸುತ್ತಿದ್ದಾಗ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಪರಿಣಾಮ ಸ್ಥಳದಲ್ಲೇ ಕುರಿ ಸಾವನ್ನಪ್ಪಿದ್ದು ಈ ಬಗ್ಗೆ ಕುಳ್ಳ ಎಂಬ ರೈತನಿಗೆ ಸೇರಿರುವ ಮಂದೇ ಕುರಿಯಾಗಿದೆ ಎಂದು ತಿಳಿದು ಬಂದಿದೆ..ಭಯಪೀತರಾದ ರೈತರು : ಕಬ್ಬಿನ ತೋಟದಿಂದ ಬಂದು ಮಂದೇ ಕುರಿ ಮೇಲೆ ದಾಳಿ ನಡೆಸಿ ಕುರಿಯನ್ನು ಕಚ್ಚಿ ಗಾಯಗೊಳಿಸಿ ಕುರಿ ಸಾವನ್ನಪ್ಪಿರುವುದರಿಂದ ತೋಟದ ಜಮೀನಿನಲ್ಲಿ ವಾಸಿಸುತ್ತಿರುವ ರೈತರು ಹಾಗೂ ಗಂಗನ ದೊಡ್ಡಿ ಗ್ರಾಮದ ನಿವಾಸಿಗಳು ಹಾಗೂ ರೈತರು ಆತಂಕ ವ್ಯಕ್ತಪಡಿಸಿದ್ದು ಚಿರತೆ ಹಗಲಿನಲ್ಲಿಯೇ ದಾಳಿ ನಡೆಸಿ ಕುರಿಯನ್ನು ಕುಂದುಹಾಕಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರೈತರು ನಿವಾಸಿಗಳು ಭಯಬಿತರಾಗಿದ್ದಾರೆ....ಚಿರತೆ ಸೆರೆಗೆ ಅಗ್ರಹ : ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದಲ್ಲಿಯೇ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ಓಡಿ ಹೋಗುತ್ತಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆಹಿಡಿದು ಬೇರೆ ಬಿಡಬೇಕು ಎಂದು ರೈತ ಮುಖಂಡರಾದ ಅಮ್ಜದ್ ಖಾನ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ...ಪರಿಹಾರಕ್ಕೆ ಒತ್ತಾಯ : ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಕುರಿ ಹೀಗಾಗಿ ನಷ್ಟ ಉಂಟಾಗಿರುವ ಮಂದೇ ಕುರಿ ಮಾಲಿಕ ಕುಳ್ಳನಿಗೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದೆ....Hnr,4news,4 ಹನೂರು ತಾಲೂಕಿನ ಗಂಗನ್ ದೊಡ್ಡಿ ಗ್ರಾಮದ ಬಳಿ ಮೇಯುತ್ತಿದ್ದ ಮಂದೇ ಕುರಿ ಮೇಲೆ ದಾಳಿ ನಡೆಸಿ ಚಿರತೆ ಕುರಿ ಒಂದನ್ನು ಒಂದು ಹಾಕಿರುವ ಘಟನೆ ವರದಿಯಾಗಿದೆ | Kannada Prabha

ಸಾರಾಂಶ

ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದ ಬಳಿ ಮೇಯುತ್ತಿದ್ದ ಮಂದೇ ಕುರಿ ಮೇಲೆ ಚಿರತೆ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿದೆ.

ಕನ್ನಡಪ್ರಭ ವಾರ್ತೆ ಹನೂರು

ಚಿರತೆ ದಾಳಿಗೆ ಕುರಿ ಬಲಿಯಾಗಿರುವ ಘಟನೆ ಗಂಗನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯಿಂದ ಗ್ರಾಮಸ್ಧರು ಭಯಭೀತರಾಗಿದ್ದಾರೆ.

ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದ ದತ್ತೇಶ್ ಕುಮಾರ್ ಜಮೀನಿನ ಬಳಿ ಮಧ್ಯಾಹ್ನ ಮಂದೇ ಕುರಿಗಳನ್ನು ಮೇಯಿಸುತ್ತಿದ್ದಾಗ ಹಠಾತ್ತನೇ ದಾಳಿ ನಡೆಸಿದ ಚಿರತೆಯು ಕುರಿಯನ್ನು ಕಚ್ಚಿ ಹೊತ್ತೊಯ್ಯುವ ಸಂದರ್ಭದಲ್ಲಿ ಅಲ್ಲೇ ಇದ್ದಂತ ಕುರಿಗಾಹಿಗಳು ಕಿರುಚಾಡುತ್ತಿದ್ದನ್ನು ನೋಡಿದಾಗ ಚಿರತೆ ಕುರಿಯನ್ನು ಬಿಟ್ಟು ಕಬ್ಬಿನ ತೋಟಕ್ಕೆ ಪರಾರಿಯಾಗಿದೆ ಎನ್ನಲಾಗಿದೆ.

ಕುರಿ ಬಲಿ ಪಡೆದ ಚಿರತೆ:

ಕಳೆದ ಹಲವಾರು ತಿಂಗಳ ಹಿಂದೆ ಚಿರತೆ ಈ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಕೊಂದು ನಾಪತ್ತೆಯಾಗಿದ್ದ ಚಿರತೆ ಮತ್ತೆ ಶನಿವಾರ ಮಧ್ಯಾಹ್ನ ಕುರಿ ಮೇಯಿಸುತ್ತಿದ್ದಾಗ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಪರಿಣಾಮ ಸ್ಥಳದಲ್ಲೇ ಕುರಿ ಸಾವನ್ನಪ್ಪಿದ್ದು ಈ ಬಗ್ಗೆ ಕುಳ್ಳ ಎಂಬ ರೈತನಿಗೆ ಸೇರಿರುವ ಮಂದೇ ಕುರಿ ಎಂದು ತಿಳಿದು ಬಂದಿದೆ.

ಭಯಭೀತರಾದ ರೈತರು:

ಹಗಲಿನಲ್ಲಿಯೇ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿರುವ ಬಗ್ಗೆ ರೈತರು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಿರತೆ ಸೆರೆಗೆ ಆಗ್ರಹ:

ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದಲ್ಲಿಯೇ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ಓಡಿ ಹೋಗುತ್ತಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆಹಿಡಿದು ಬೇರೆಡೆ ಬಿಡಬೇಕು ಎಂದು ರೈತ ಮುಖಂಡ ಅಮ್ಜದ್ ಖಾನ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪರಿಹಾರಕ್ಕೆ ಒತ್ತಾಯ:

ಚಿರತೆ ದಾಳಿಯಿಂದ ಕುರಿ ಸಾವನ್ನಪ್ಪಿದ್ದು, ಮಾಲಿಕ ಕುಳ್ಳನಿಗೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು