ಜಾನುವಾರುಗಳ ನಿಗೂಢ ಸಾವಿನ ಹಿಂದೆ ಚಿರತೆ ದಾಳಿ ಶಂಕೆ

KannadaprabhaNewsNetwork |  
Published : Apr 07, 2024, 01:53 AM IST
ಚಿತ್ರ ಶೀರ್ಷಿಕೆ - ಆಳಂದ 1ಆಳಂದ: ಮದಗುಣಕಿ ಹೊಲದಲ್ಲಿ ಕಟ್ಟಿದ ಪಿರಪ್ಪಾ ಜಮಾದಾರಗೆ ಸೇರಿದ ಮೂರು ವರ್ಷದ ಹೋರಿಯನ್ನು ಶುಕ್ರವಾರ ರಾತ್ರಿ ಅಪರಚಿತ ಪ್ರಾಣಿ ದಾಳಿಮಾಡಿ ಅರಿಬರೆ ತಿಂದು ಕಾಲ್ಕಿತ್ತಿದೆ ಬಗ್ಗೆ ರೈತ ತೋರಿಸಿದನು.  | Kannada Prabha

ಸಾರಾಂಶ

ಮದಗುಣಕಿ ಹೊಲಗಳಲ್ಲಿ ರೈತರು ಕಟ್ಟಿದ ದನಗಳ ಮೇಲೆ ರಾತ್ರಿ ಅಪರಿಚಿತ ಪ್ರಾಣಿಗಳು ಸರಣಿ ದಾಳಿ ಮುಂದುವರೆಸಿದ್ದು, ಶುಕ್ರವಾರವೂ ಸಹಿತ ರಾತ್ರಿ ಮತ್ತೊಂದು ಹೋರಿ ಬಲಿಯಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನ ಮದಗುಣಕಿ ಹೊಲಗಳಲ್ಲಿ ರೈತರು ಕಟ್ಟಿದ ದನಗಳ ಮೇಲೆ ರಾತ್ರಿ ಅಪರಿಚಿತ ಪ್ರಾಣಿಗಳು ಸರಣಿ ದಾಳಿ ಮುಂದುವರೆಸಿದ್ದು, ಶುಕ್ರವಾರವೂ ಸಹಿತ ರಾತ್ರಿ ಮತ್ತೊಂದು ಹೋರಿ ಬಲಿಯಾಗಿದೆ.

ಗ್ರಾಮದ ಪಿರಪ್ಪಾ ಜಮಾದಾರ ಎಂಬುವರು ತಮ್ಮ ಹೊಲದಲ್ಲಿ ಕಟ್ಟಿದ ಹೋರಿಯ ಮೇಲೆ ರಾತ್ರಿ ಅಪರಿತ ಪ್ರಾಣಿ ದಾಳಿ ಕೈಗೊಂಡು ಅರೆಬರೆ ತಿಂದುಹಾಕಿ ಕಾಲ್ಕಿತ್ತಿದೆ. ಇದರಿಂದ ನೆರೆ ಹೊರೆಯ ರೈತರು ತಮ್ಮ ಭಯ ಭೀತಿಯಲ್ಲಿ ಕಾಲ ಕಳೆಯುವಂತಾಗಿದ್ದು, ಅಲ್ಲದೆ ತಮ್ಮ ದನ ಕರುಗಳ ರಕ್ಷಣೆಗಾಗಿ ಪರದಾಡುವಂತೆ ಮಾಡಿದೆ.

ಈಗಾಗಲೇ ಸರಣಿಯಾಗಿ ಆರು ದನಗಳು ತಿಂದುಹಾಕಿದ್ದು, ಗುರುವಾರ ಮತ್ತು ಶುಕ್ರವಾರದ ಮಧ್ಯದ ರಾತ್ರಿಯಲ್ಲಿ ಅಪರಿಚಿತ ಪ್ರಾಣಿ ನಡೆಸಿದ ದಾಳಿಯಿಂದಾಗಿ ರೈತ ಪಿರಪ್ಪಾ ಜಮಾದಾರಗೆ ಸೇರಿದ ಮೂರು ವರ್ಷದ ಹೋರಿ ಬಲಿಯಾಗಿದ್ದು, ಇದರಿಂದಾಗಿ ನಮ್ಮ ದನಗಳು ತಿಂದುಹಾಕಿದರೆ ಏನು ಗತಿ ಎಂಬ ರೈತರಲ್ಲಿ ಶಂಕೆವ್ಯಕ್ತವಾಗಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸಂಬಂಧಿತ ಪ್ರಾದೇಶಿಕ ಅರಣ್ಯ ಇಲಾಖೆಯ ಆರ್‌ಎಫ್‍ಒ ಜಗನಾಥ ಕೋರಳ್ಳಿ ಅವರು ಈ ಹಿಂದೆ ತಿಂದುಹಾಕಿದ ದನಗಳ ಮಾಂಸ ಸೇರಿ ಅವಶೇಷಗಳನ್ನು ಪರೀಕ್ಷಾರ್ಥವಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪರೀಕ್ಷೆಯಲ್ಲಿ ಚಿರತೆಯ ದಾಳಿಯೆಂದು ಶೇ.60ರಷ್ಟು ಪ್ರಾಥಮಿಕವಾಗಿ ಶಂಕಿಸಲಾಗಿದೆ ಎಂದು ಗೊತ್ತಾಗಿದೆ.

ಈ ಕುರಿತು ಸರಣಿ ದಾಳಿಯ ಪತ್ತೆಗೆ ಹೈ ಅಲರ್ಟಾಗಿ ಜಾಲಬೀಸಿರುವ ಪ್ರಾದೇಶಿಕ ಅರಣ್ಯಾಧಿಕಾರಿಗಳು ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಿ ಪತ್ತೆ ಹಚ್ಚಿ ಅಪರಿಚಿತ ಪ್ರಾಣಿಯನ್ನು ಸೇರೆ ಹಿಡಿಯಲು ಮುಂದಾಗಿದ್ದಾರೆ.

ಅಲ್ಲದೆ, ಅಪರಿಚಿತ ಪ್ರಾಣಿ ಪತ್ತೆಯಾಗುವ ತನಕ ತಮ್ಮ ಜಾನುವಾರುಗಳನ್ನು ರೈತರು ಸೂಕ್ತ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಬೇಕು ಎಂದು ಅಧಿಕಾರಿ ಜಗನಾಥ ಕೊರಳ್ಳಿ ಅವರು ಮನವಿ ಮಾಡಿದ್ದಾರೆ.

ಅಧಿಕಾರಿಗಳು ಠಿಕಾಣಿ ಹೂಡಿ ದನಗಳ ಮೇಲೆ ದಾಳಿ ಮಾಡುತ್ತಿರುವ ಅಪರಿಚಿತ ಪ್ರಾಣಿಯನ್ನು ಪತ್ತೆ ಮಾಡಿ ರೈತರಲ್ಲಿ ಆವರಿಸಿದ ಭಯವನ್ನು ದೂರಮಾಡಬೇಕು ಎಂದು ಗ್ರಾಮದ ಮುಖಂಡ ಮಹಾಂತೇಶ ಸಣ್ಣಮನಿ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ