ಬೋನಿಗೆ ಸೆರೆಯಾದ ಚಿರತೆ: ರೈತರು, ಜನ ನಿಟ್ಟುಸಿರು

KannadaprabhaNewsNetwork |  
Published : Jun 11, 2026, 12:30 AM IST
10ಕೆಎಂಎನ್ ಡಿ25 | Kannada Prabha

ಸಾರಾಂಶ

ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ಗ್ರಾಮದ ಪುಟ್ಟರಾಜು ಅವರ ಜಮೀನು ಬಳಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಆತಂಕದಲ್ಲಿದ್ದ ರೈತರು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ರಾಮನಹಳ್ಳಿ ಸೇರಿ ಹಲವು ಗ್ರಾಮಗಳ ಜನರು, ರೈತರಿಗೆ ಆತಂಕ ಉಂಟು ಮಾಡಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ.

ಗ್ರಾಮದ ಪುಟ್ಟರಾಜು ಅವರ ಜಮೀನು ಬಳಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಆತಂಕದಲ್ಲಿದ್ದ ರೈತರು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಈ ವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬಿನಗದ್ದೆ, ಗುಡ್ಡ ಪ್ರದೇಶವಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಆಗಿಂದಾಗ್ಗೆ ಗೋಚರಿಸಿಕೊಳ್ಳುತ್ತಿತ್ತು. ರೈತರ ಜಾನುವಾರು, ಕುರಿ, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ಮಾಡಿಕೊಂದು ತಿಂದು ಹಾಕಲಾಗಿತ್ತು.

ರೈತರ ಕೊಟ್ಟಿಗೆಗಳಿಗೆ ನುಗ್ಗಿ ಕಟ್ಟಿ ಹಾಕಲಾಗುತ್ತಿದ್ದ ಜಾನುವಾರುಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಕುತ್ತಿತ್ತು. ಚಿರತೆ ಉಪಟಳಕ್ಕೆ ರೋಸಿ ಹೋಗಿದ್ದ ರೈತಾಪಿ ಜನತೆ ತಾಲೂಕು ವಲಯ ಅರಣ್ಯಇಲಾಖೆಯವರಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಲಾಗಿತ್ತು.

ಗ್ರಾಮಸ್ಥರ ಮನವಿ ಮೇರೆ ಸುತ್ತಮುತ್ತಲ ಪ್ರದೇಶ ವೀಕ್ಷಣೆ ಮಾಡಿದ ವಲಯಅರಣ್ಯಇಲಾಖೆಯವರು ರಾಮನಹಳ್ಳಿಯ ಪುಟ್ಟೇಗೌಡರ ಜಮೀನು ಬಳಿ ಚಿರತೆ ಸೆರೆಗಾಗಿ ವಾರದ ಹಿಂದೆ ಬೋನು ಇರಿಸಲಾಗಿತ್ತು. ನಿತ್ಯವೂ ಚಿರತೆ ಚಲನವಲನ ವೀಕ್ಷಣೆ ಮಾಡಲಾಗಿತ್ತು.

ಮಂಗಳವಾರ ರಾತ್ರಿ ಆಹಾರ ಹುಡುಕುತ್ತ ಬಂದ ಚಿರತೆ ಬೋನಿನಲ್ಲಿದ್ದ ನಾಯಿ ತಿನ್ನಲು ನುಗ್ಗಿ ಬೋನಿನಲ್ಲಿ ಬಂಧಿಯಾಗಿದೆ.

ವಿಷಯ ತಿಳಿದ ಗ್ರಾಮಸ್ಥರು ಚಿರತೆ ವೀಕ್ಷಿಸಲು ಸ್ಥಳಕ್ಕೆ ಆಗಮಿಸಿ ತಂಡೋಪತಂಡವಾಗಿ ಆಗಮಿಸಿದ್ದರು. ತಾಲೂಕು ವಲಯಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೋನಿನಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ತಾಲೂಕು ಅರಣ್ಯ ಇಲಾಖೆ ಕಚೇರಿಗೆ ಸುರಕ್ಷಿತವಾಗಿ ರವಾನಿಸಿದರು.

ಚಿರತೆ ಆರೋಗ್ಯತಪಾಸಣೆ ಮಾಡಿ ಮೇಲಾಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆಯಂತಹ ಸೂಕ್ತವಾದ ರಕ್ಷಿತಅಭಯಾರಣ್ಯಕ್ಕೆ ಚಿರತೆ ಬಿಡಲಾಗುವುದು ಎಂದು ತಾಲೂಕು ವಲಯ ಅರಣ್ಯಅಧಿಕಾರಿ ಎಂ.ವಿ. ಅನಿತಾ ತಿಳಿಸಿದರು.

ಸಿಬ್ಬಂದಿ ಉಪವಲಯ ಅರಣ್ಯಅಧಿಕಾರಿ ಚೇತನ್, ಅರಣ್ಯ ಪಾಲಕಿ ರಕ್ಷಕಿಅಭಿ, ಸಿಬ್ಬಂದಿಗಳಾದ ರವಿಕುಮಾರ್, ಶ್ರೀನಿವಾಸ್, ಚಿರತೆ ಕಾರ್ಯ ಪಡೆಯ ರಾಜೇಶ್, ಕುಮಾರ್‌ ಉಪಸ್ಥಿತರಿದ್ದರು.

ಚಿರತೆ ದಾಳಿಗೆ ಹಸು ಬಲಿ

ಕೆ.ಎಂ.ದೊಡ್ಡಿ:ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಕಪಿನಿಗೌಡರಿಗೆ ಸೇರಿದ ಹಸು ಬಲಿಯಾಗಿದ್ದು, ಇದರಿಂದ ಸಾವಿರಾರು ನಷ್ಟ ಉಂಟಾಗಿದೆ. ಕಪಿನಿಗೌಡರು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ದಾಳಿ ಮಾಡಿದ ಚಿರತೆ ಹಸುವಿನ ಅರ್ಧ ಭಾಗದಷ್ಟು ದೇಹ ತಿಂದಿದೆ. ಚಿರತೆ ದಾಳಿಯಿಂದ‌ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆದರೆ, ಚಿರತೆ ಹಿಡಿಯಲು ಬೋನ್ ಇಡದೆ ವಾಪಸಾಗಿರುವುದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಚಿರತೆ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದೆ. ಇದರಿಂದ ಜನರು ಜಮೀನುಗಳಿಗೆ ಹಸು, ಮೇಕೆ, ಕುರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದಕ್ಕೆ ಭಯ ಪಡುವಂತಾಗಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರವಣಬೆಳಗೊಳದಲ್ಲಿ ಕನ್ನಡದ ಮತ್ತೊಂದು ಶಾಸನ ಪತ್ತೆ
ವೈದ್ಯ ಜ್ಞಾನದ ಶಕ್ತಿ ಕೇಂದ್ರ ‘ಮಿಮ್ಸ್ ಕೇಂದ್ರ ಗ್ರಂಥಾಲಯ’..!