ಕನಕಪುರದಲ್ಲಿ ಬೋನಿಗೆ ಬಿದ್ದ ಚಿರತೆ

KannadaprabhaNewsNetwork |  
Published : Nov 12, 2025, 01:30 AM IST
ಕೆ ಕೆ ಪಿ ಸುದ್ದಿ 03: | Kannada Prabha

ಸಾರಾಂಶ

ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ತಿಳಿದ ತಕ್ಷಣ ವೆಂಕಟರಾಯನದೊಡ್ಡಿ ರಸ್ತೆಯ ದೊಡ್ಡ ತಾಂಡ್ಯದ ಬಳಿಯಿರುವ ಗೋ ಶಾಲೆಯಲ್ಲಿ ಬೋನ್ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಕನಕಪುರ: ಕಳೆದ ಮೂರು ದಿನಗಳಿಂದ ನಗರದ ಸಾರ್ವಜನಿಕ ನಿದ್ದೆಗೆಡಿಸಿದ್ದ ಚಿರತೆಮರಿ (03) ಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕನಕಪುರ ನಗರದ ಬೈ ಪಾಸ್ ಹಾದು ಹೋಗುವ ಮಹಾರಾಜ ಕಟ್ಟೆ ರಸ್ತೆ ಹಾಗೂ ಸುತ್ತ- ಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಚಿರತೆಯೊಂದು ಸಂಚಾರ ಮಾಡುತ್ತಿರುವುದು ಸಿಸಿಟಿವಿ ದೃಶ್ಯಗಳಿಂದ ಕಂಡು ನಗರದ ಸಾರ್ವಜನಿಕರು ಭಯಭೀತರಾಗಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ತಿಳಿದ ತಕ್ಷಣ ವೆಂಕಟರಾಯನದೊಡ್ಡಿ ರಸ್ತೆಯ ದೊಡ್ಡ ತಾಂಡ್ಯದ ಬಳಿಯಿರುವ ಗೋ ಶಾಲೆಯಲ್ಲಿ ಬೋನ್ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗಿನ ಜಾವದ ವೇಳೆ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.

ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಶಿವಕುಮಾರ್, ಗಾರ್ಡ್‌ ಅಣ್ಣಯಪ್ಪ, ವಾಚರ್ ದಾಸೇಗೌಡ, ರಾಹುಲ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೆ ಕೆ ಪಿ ಸುದ್ದಿ 03:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ