ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರ ಗೋಷ್ಠಿಯಲ್ಲಿ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ
ಎಂ.ಪ್ರಹ್ಲಾದ
(ಶಬರಿ ವೇದಿಕೆ)ಕನ್ನಡಪ್ರಭ ವಾರ್ತೆ ಕನಕಗಿರಿ
2024ರ ಆನೆಗೊಂದಿ ಉತ್ಸವ ನಿಮಿತ್ತ ಗಗನ್ ಮಹಲ್ ಬಳಿ ಹಮ್ಮಿಕೊಂಡಿರುವ ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.
ಇನ್ನೂ ಈ ಪ್ರದೇಶದ ಸುತ್ತಮುತ್ತಲೂ ಉತ್ಖನನ ಮಾಡಿದಾಗ ಮಣ್ಣಿನ ಮಡಿಕೆಗಳು ಸಿಕ್ಕಿದ್ದು, ಆನೆಗೊಂದಿ ಕುಂಬಾರಿಕೆಗೂ ಹೆಸರುವಾಸಿಯಾಗಿತ್ತು ಎನ್ನುವುದು ಸಾಬೀತಾಗಿದೆ. ಹುಚ್ಚಪ್ಪಯ್ಯ, ಸರಸ್ವತಿ ಮಠಗಳೂ ಇವೆ. ಗಂಡುಗಲಿ ಕುಮಾರರಾಮ ಹಾಗೂ ಹಿರೇಬೆಣಕಲ್ ಶಿಲಾ ಸಮಾಧಿಗಳು, ಸಾವಿರಾರು ವರ್ಷಗಳ ಹಿಂದಿನ ಶಿಲಾ ಚಿತ್ರಗಳು ಪ್ರವಾಸಿಗರನ್ನು ವಿಸ್ಮಯಗೊಳಿಸುತ್ತಿವೆ. ಇಂತಹ ಅದ್ಭುತ ಪರಂಪರೆಯನ್ನು ಹೊಂದಿರುವ ಆನೆಗೊಂದಿ ಪ್ರದೇಶದಲ್ಲಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ನವವೃಂದಾವನ ಗಡ್ಡಿಯ ರಘುವರ್ಯರು ಹಾಗೂ ಜಯತೀರ್ಥರ ವಿಚಾರವಾಗಿ ರಾಯರಮಠ ಹಾಗೂ ಉತ್ತರಾಧಿಮಠಗಳಿಂದ ಉಂಟಾದ ಜಗಳ ನ್ಯಾಯಾಲಯದಲ್ಲಿದೆ. ಇಂತಹ ವಿಚಾರಗಳು ಸೂಕ್ಷ್ಮವಾಗಿದ್ದು, ಸಂಶೋಧನೆಗಳ ಮೂಲಕ ಈ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಎರಡೂ ಮಠದವರು ಈ ಬಗ್ಗೆ ಸಂಶೋಧನೆಗೊಳಪಡಿಸಿ ಸತ್ಯಾಂಶ ತಿಳಿಯುವಂತಾಗಬೇಕು. ವಾದ-ವಿವಾದದಿಂದ ಯಾವುದೇ ಪ್ರಯೋಜನವಿಲ್ಲ ಎಂದರಲ್ಲದೆ, ಮೋಹನದಾಸರು ಆನೆಗೊಂದಿಯಲ್ಲಿ ಜನಿಸಿದ್ದು, ವಿಜಯದಾಸರ ಶಿಷ್ಯರಾಗಿದ್ದಂತವರು. ಇವರು ಜಾತಿ ಮತ್ತು ಅಸಮಾನತೆ ವಿರುದ್ಧ ಹೋರಾಡಿದ್ದು, ತಮ್ಮ ಕಿರ್ತನೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ರಾಯಚೂರು ಜಿಲ್ಲೆಯ ಮಾನವಿಯ ಚೀಕಲಪರವಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸಂಚರಿಸಿದ್ದಾರೆಂದು ತಿಳಿಸಿದರು.
ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಪೂರ್ಣಿಮಾ, ಪತ್ರಕರ್ತರಾದ ರಾಮಮೂರ್ತಿ ನವಲಿ, ನಾಗರಾಜ ಇಂಗಳಗಿ, ವಿಶ್ವನಾಥ ಬೆಳಗಲ್ ಮಠ, ಕರವೇ ಸಂಘಟಕರಾದ ಪಂಪಣ್ಣ ನಾಯಕ, ಅರ್ಜುನ ನಾಯಕ, ಚನ್ನಬಸವ ಜೇಕಿನ್, ರಾಮಣ್ಣ ನಾಯಕ ಬಳ್ಳಾರಿ ಸೇರಿದಂತೆ ಇತರರಿದ್ದರು.