ಶಿರಸಿ: ಮನುಷ್ಯನಿಗೆ ಆರೋಗ್ಯವೇ ಮೊದಲಾಗಬೇಕು. ಅದಕ್ಕಾಗಿ ಅಂತರಂಗ ಹಾಗೂ ಬಹಿರಂಗ ಸ್ವಚ್ಛತೆ ಇಟ್ಟುಕೊಳ್ಳಬೇಕಿದೆ ಎಂದು ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನುಡಿದರು.
ಹೊಸದುರ್ಗದ ಕುಂಚಟಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಸ್ವಚ್ಛತೆಗಾಗಿ ಮೀಸಲಿಟ್ಟು ಕೆಲಸ ಮಾಡುತ್ತೇವೆ. ಫೇಸ್ಬುಕ್, ವಾಟ್ಸ್ಆ್ಯಪ್ಗಳಿಗೆ ಮಾತ್ರ ಸೀಮಿತ ಮಾಡಿಕೊಳ್ಳುತ್ತೇವೆ. ಆದರೆ, ನಿತ್ಯವೂ ಸ್ವಚ್ಚತಾ ದಿನವಾಗಿಸಿಕೊಳ್ಳಬೇಕು. ಕೇವಲ ಬಹಿರಂಗ ಸ್ವಚ್ಛತಾ ಕಾರ್ಯವಲ್ಲ, ಅಂತರಂಗದ ಸ್ವಚ್ಛತೆಗೆ ಕೂಡ ಆದ್ಯತೆ ನೀಡಬೇಕು ಎಂದರು.ನಿಸರ್ಗ ವೈದ್ಯ ಡಾ. ವೆಂಕಟರಮಣ ಹೆಗಡೆ ಮಾತನಾಡಿ, ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಗೆ ಆಗಮಿಸಿದ ಗುರುಗಳು ಇಲ್ಲಿನ ನೆಲವನ್ನೂ ಪಾವನಗೊಳಿಸಿದ್ದಾರೆ. ನಮ್ಮ ಆಹಾರ ಪದ್ಧತಿಗಳಿಂದ, ಜೀವನ ಕ್ರಮದಿಂದ ಅನಾರೋಗ್ಯ ಹೆಚ್ಚಾಗುತ್ತಿದೆ ಎಂದರು.
ಯಕ್ಷರೂಪಕ ಪ್ರದರ್ಶಿಸಿದ ತುಳಸಿ ಹೆಗಡೆ, ಪ್ರಸಾಧನ ಕಲಾವಿದರಾಗಿ ಸಹಕಾರ ನೀಡಿದ ವೆಂಕಟೇಶ ಹೆಗಡೆ ಅವರನ್ನು ಉಭಯ ಶ್ರೀಗಳು ಗೌರವಿಸಿದರು. ಈ ವೇಳೆ ನಾರಾಯಣ ಹೆಗಡೆ, ಸಂಗೀತಾ ವಿ.ಹೆಗಡೆ ಇತರರು ಇದ್ದರು.ಕಲೆ ಗೌರವಿಸಿದರೆ ಸಾಧನೆ ಸಾಧ್ಯ: ರಾಜೀವ ಅಜ್ಜೀಬಳ
ಯಾವುದೇ ಲಲಿತ ಕಲೆಗಳ ಕಲಿಕೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಪ್ರದರ್ಶನಕ್ಕೆ ಸೀಮಿತಗೊಳ್ಳದೇ ನಿರಂತರ ಸಾಧನೆ ಮಾಡಿದರೆ ಒಂದಿಲ್ಲೊಂದು ಕಲಾ ಕ್ಷೇತ್ರದ ನಕ್ಷತ್ರಗಳಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದ ಅವರು, ಕಲೆ ದೊಡ್ಡದೇ ಹೊರತು ಕಲಾವಿದನಲ್ಲ. ಕಲೆಯನ್ನು ಸದಾ ಗೌರವಿಸಬೇಕು. ಗುರುವಿನ ಮೂಲಕ ಕಲೆ ಕಲಿತಾಗ ಶಿಷ್ಯರಿಂದ ಇನ್ನಷ್ಟು ಸಾಧನೆ ಸಾಧ್ಯವಿದೆ. ಗುರುಗಳಿಗೆ ಹಾಗೂ ಕಲೆಗೆ ಗೌರವ ಕೊಡುವವರು ಸಾಧನೆ ಮಾಡುತ್ತಾರೆ ಎಂದರು.
ಸಮ್ಮಾನ ಪಡೆದ ಪಂಡಿತ್ ಎಂ.ಟಿ. ಭಾಗವತ್ ಮಾತನಾಡಿ, ವಿದ್ಯಾರ್ಥಿಗಳ ಗಾಯನ, ವಾದನ ಪ್ರಸ್ತುತಿ ಕಲಿಸುವ ಗುರುವಿನ ಆಸಕ್ತಿಯ ದ್ಯೋತಕ. ನಿನಾದ ಸಂಗೀತ ಸಭಾದ ಗುರು ವೃಂದಕ್ಕೆ ವಿಶೇಷ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಬಳಿಕ ಎಂ.ಟಿ. ಭಾಗವತ್, ಶ್ರೀಪಾದ ಹೆಗಡೆ, ಬಕುಲಾ ಹೆಗಡೆ ಅವರು ಹಾಡಿದರು. ತಬಲಾದಲ್ಲಿ ಪಂ. ಮೋಹನ್ ಹೆಗಡೆ, ಅಕ್ಷಯ ಭಟ್ಟ ಅಂಸಳ್ಳಿ, ವಿಜಯೇಂದ್ರ ಹೆಗಡೆ ಅಜ್ಜಿಬಳ, ಭಾಸ್ಕರ ಹೆಗಡೆ ಮುತ್ತಿಗೆ, ಹಾರ್ಮೋನಿಯಂದಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕಾರ ನೀಡಿದರು. ಇದೇ ವೇಳೆ ಪಂಡಿತ್ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ಬಕುಲಾ ಹೆಗಡೆ ಅವರನ್ನು ಶಿಷ್ಯರು ಗುರು ನಮನ ಸಲ್ಲಿಸಿ ಅಭಿನಂದಿಸಿದರು.