ಉದ್ಯಮಗಳಿಂದ ರೈತರಿಗೆ ಲಾಭ ಸಿಗಲಿ: ಎಲ್.ಎ. ನಾರಾಯಣ

KannadaprabhaNewsNetwork |  
Published : Jun 27, 2025, 12:49 AM IST
ಬೀಳಗಿಯ ರಾಘವೇಂದ್ರ ದೇವಸ್ಥಾನ ಸಭಾಭವನದಲ್ಲಿ ನೂತನವಾಗಿ ಆರಂಭಗೊಂಡ ಗುಢೂರ ಎಂಟರಪ್ರೈಸಿಸ್ ಅವರ ಸಿಆರ್‌ಐ ಪಂಪ ಸೆಟ್ ಮಳಿಗೆಯನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಜಮೀನುಗಳಲ್ಲಿ ನಿರಂತರ ಕೆಲಸ ಮಾಡಿಯೂ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರಿಗೆ ತರ್ತು ಪರಿಹಾರ ದೊರೆಯಬೇಕು ಮತ್ತು ರೈತರಿಗಾಗಿ ಬರುವ ಯಾವುದೇ ಉದ್ಯಮ ರೈತರಿಗೆ ಲಾಭದಾಯಕ ಸೌಲಭ್ಯ ಒದಗಿಸುವಂತಿರಬೇಕು ಎಂದು ಸಿಆರ್‌ಐ ವ್ಯವಸ್ಥಾಪಕ ಎಲ್.ಎ. ನಾರಾಯಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಜಮೀನುಗಳಲ್ಲಿ ನಿರಂತರ ಕೆಲಸ ಮಾಡಿಯೂ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರಿಗೆ ತರ್ತು ಪರಿಹಾರ ದೊರೆಯಬೇಕು ಮತ್ತು ರೈತರಿಗಾಗಿ ಬರುವ ಯಾವುದೇ ಉದ್ಯಮ ರೈತರಿಗೆ ಲಾಭದಾಯಕ ಸೌಲಭ್ಯ ಒದಗಿಸುವಂತಿರಬೇಕು ಎಂದು ಸಿಆರ್‌ಐ ವ್ಯವಸ್ಥಾಪಕ ಎಲ್.ಎ. ನಾರಾಯಣ ತಿಳಿಸಿದರು.

ಇಲ್ಲಿನ ರಾಘವೇಂದ್ರ ದೇವಸ್ಥಾನ ಸಭಾಭವನದಲ್ಲಿ ನೂತನವಾಗಿ ಆರಂಭಗೊಂಡ ಗುಢೂರ ಎಂಟರಪ್ರೈಸಿಸ್ ಅವರ ಸಿಆರ್‌ಐ ಪಂಪ್‌ ಸೆಟ್ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಉದ್ಯಮ ಆರಂಭಿಸುವವರು ನಮಗೇನು ಲಾಭ ಎಂಬುದನ್ನು ನೋಡಿ ಉದ್ಯಮ ಆರಂಭಿಸುತ್ತಾರೆ. ಆದರೆ ಗುಢೂರ ಮನೆತನದವರು ರೈತರಿಗೆ ಲಾಭವಾಗಲಿ ಎಂದು ಮಳಿಗೆ ಆರಂಭ ಮಾಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷಯ ನಾಯ್ಕರ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬಹು ದೊಡ್ಡ ತ್ಯಾಗ ಮಾಡಿದ ಬೀಳಗಿ ತಾಲೂಕು ಎಲ್ಲ ರಂಗದಲ್ಲೂ ಹತ್ತು ಹಲವಾರು ಸಮಸ್ಯೆ ಎದುರಿಸುತ್ತಿದೆ. ರೈತರು, ಜನರಿಗೆ ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ತರಲಾಗುತ್ತದೆ. ಆದರೆ ಈಗ ಬೀಳಗಿಯಲ್ಲಿಯೇ ಮಳಿಗೆ ಆರಂಭಿಸಿದ ಗುಢೂರ ಎಂಟರಪ್ರೈಸಿಸ್‌ನವರು ಈ ಭಾಗದ ರೈತರಿಗೆ ಆಸರೆಯಾಗಲಿದ್ದಾರೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಗುಢೂರ ಎಂಟರಪ್ರೈಸಿಸ್‌ನ ಅನೀಲ ಹನುಮಂತ ಗುಢೂರ, ಅಕ್ಷಯ ಗುಢೂರ, ಆಕಾಶ ಗುಢೂರ, ಹಿರಿಯರಾದ ಕೃಷ್ಣಾ ಬಾಡಗಂಡಿ, ಸಿಆರ್‌ಐನ ವಿಶ್ವನಾಥ ಹೂಗಾರ, ಅಶೋಕ ಜೋಶಿ, ಶೇಖರ ಗೊಳಸಂಗಿ, ಶ್ರೀಶೈಲ ಜತ್ತಿ, ರವಿ ಪಾಟೀಲ, ಸುರೇಂದ್ರ ನಾಯಕ, ಬಸಯ್ಯ ಹಿರೇಮಠ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ