ದಾಬಸ್ಪೇಟೆ: ಆಹಾರ ಪದ್ಧತಿ ಬದಲಾದಂತೆ, ರೋಗಗಳೂ ಹೆಚ್ಚಾಗುತ್ತಿವೆ. ಸ್ವದೇಶಿ ಮತ್ತು ಪಾರಂಪರಿಕ ಗ್ರಾಮೀಣ ಆಹಾರ ಪದ್ಧತಿ ಅಳವಡಿಸಿಕೊಳ್ಳಿ ಎಂದು ಪವಾಡ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು
ದಾಬಸ್ಪೇಟೆ: ಆಹಾರ ಪದ್ಧತಿ ಬದಲಾದಂತೆ, ರೋಗಗಳೂ ಹೆಚ್ಚಾಗುತ್ತಿವೆ. ಸ್ವದೇಶಿ ಮತ್ತು ಪಾರಂಪರಿಕ ಗ್ರಾಮೀಣ ಆಹಾರ ಪದ್ಧತಿ ಅಳವಡಿಸಿಕೊಳ್ಳಿ ಎಂದು ಪವಾಡ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸೋಂಪುರ ಹೋಬಳಿಯ ಕೆಂಪಯ್ಯನಪಾಳ್ಯ (ಕಲ್ಲನಾಯ್ಕನಹಳ್ಳಿ) ಚಿಲುಮೆ ರವಿಕುಮಾರ್ ಫೌಂಡೇಶನ್ನಿಂದ ಆರೋಗ್ಯ ವರ್ಧಕ ಹೃದಯ ರಕ್ಷಾ ಸಂಜೀವಿನಿ ಲಡ್ಡು ವಿತರಣೆ, ರೈತರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಶೈಲಿಯ ಆಹಾರ ಪದ್ಧತಿ ಭಾಗವಾಗಿ, ಅಶ್ವಗಂಧ, ಅಮೃತಬಳ್ಳಿ, ಅಗಸೆ ಬೀಜದ ಸಾರದ ಲಡ್ಡುವನ್ನು ತಯಾರಿಸಿ, ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ವಿತರಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಸಾಧಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಶ್ಲಾಘನೀಯ ಎಂದರು.
ಚಿಲುಮೆ ಟ್ರಸ್ಟ್ ನ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ಸ್ವಗ್ರಾಮದಲ್ಲಿ ಸಮಾಜಮುಖಿ ಕಾರ್ಯಕ್ಕೆ ಬೆಂಬಲವಾಗಿ ನಿಂತ ಎಲ್ಲಾ ಸ್ವಯಂ ಸೇವಕರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸೇವೆಯೇ ನನ್ನ ಗುರಿ ಎಂದರು.
ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್, ಪ್ರೆಸ್ ಕ್ಲಬ್ ರಾಜ್ಯ ಘಟಕದ ಆರ್.ಕೊಟ್ರೇಶ್, ವೀರಸಾಗರ ಗಂಗರುದ್ರಯ್ಯ, ಆರ್.ಎಸ್.ಎಸ್. ಚಂದ್ರಣ್ಣ, ಮುಖಂಡರಾದ ಭಾರತೀಪುರ ಕೆಂಪಣ್ಣ, ಗಂಗಣ್ಣ, ಚಂದ್ರಪ್ಪ, ಚಂದ್ರಶೇಖರ್, ಐಶ್ವರ್ಯ ರವಿಕುಮಾರ್, ಕೋಮಲ, ಅರೇಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ ಹಾಜರಿದ್ದರು.
(ಫೋಟೊ ಕ್ಯಾಫ್ಷನ್)
ಕೆಂಪಯ್ಯನಪಾಳ್ಯ) ಚಿಲುಮೆ ರವಿಕುಮಾರ್ ಫೌಂಡೇಶನ್, ಆರೋಗ್ಯ ವರ್ಧಕ ಹೃದಯ ರಕ್ಷಾ ಸಂಜೀವಿನಿ ಲಡ್ಡು ವಿತರಣೆ, ರೈತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.