ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸೋಣ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 10, 2025, 01:45 AM IST
ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಸೇವಾ ತಂಡದ ವಿಶಿಷ್ಟ ಕಾರ್ಯಕ್ರಮಗಳು ಪ್ರತಿ ಬಡವರ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತಿದ್ದು, ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ ಸದ್ಯ 4ನೇ ಸ್ಥಾನದಲ್ಲಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ 3000 ಸಾವಿರಕ್ಕೂ ಅಧಿಕ ಜನರು ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದೆ.

ಗದಗ: ಪ್ರತಿಜ್ಞೆ ಗೈಯುವ ಮೂಲಕ ಸೇವಾ ತಂಡದ ಕಾರ್ಯಕ್ರಮಗಳನ್ನು ಸಾರ್ಥಕ ಭಾವನೆಯಿಂದ ಕೈಗೊಳ್ಳುತ್ತಿರುವುದು ಜನಸೇವಾ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆ ನಿಟ್ಟಿನಲ್ಲಿ ಸೇವಾ ತಂಡದ ಸದಸ್ಯರಿಂದ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ನಗರದ ಕಾಟನ್ ಸೆಲ್ ಸೊಸೈಟಿ ಆವರಣದಲ್ಲಿ ಜರುಗಿದ ಎಚ್.ಕೆ. ಪಾಟೀಲ ಸೇವಾ ತಂಡದ ದಿಶಾ ಪರಿಷತ್ತಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾತ್ವಿಕ ಸೇವೆ ಮಾಡಲು ಸನ್ನದ್ಧರಾಗಿರುವ ಪ್ರತಿಯೊಬ್ಬರಿಗೂ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ಜನರಿಗೆ ಆರೋಗ್ಯ ಸೇವೆ, ರಕ್ತದಾನ ಶಿಬಿರ, ಹೃದಯ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ ಸೇರಿದಂತೆ ಒಬ್ಬ ಕ್ಯಾಪ್ಟನ್ ವ್ಯಾಪ್ತಿಗೆ ಬರುವ 50 ಕುಟುಂಬಗಳ ಜನರ ಊಟ, ಪಾಠ, ಮಾನ್ಯತೆ, ಆರೋಗ್ಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಕೊರತೆಯಾಗದಂತೆ ಸೇವಾ ಹಾಗೂ ನಿಸ್ವಾರ್ಥ ಭಾವನೆಯಿಂದ ಮಾಡುವ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ ಎಂದರು.

ಸೇವಾ ತಂಡದ ವಿಶಿಷ್ಟ ಕಾರ್ಯಕ್ರಮಗಳು ಪ್ರತಿ ಬಡವರ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತಿದ್ದು, ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ ಸದ್ಯ 4ನೇ ಸ್ಥಾನದಲ್ಲಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ 3000 ಸಾವಿರಕ್ಕೂ ಅಧಿಕ ಜನರು ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸೇವಾ ತಂಡದ ಸದಸ್ಯರ ರಚನಾತ್ಮಕ ಕೆಲಸ ರಾಜ್ಯಕ್ಕೆ ಮೊದಲ ಸ್ಥಾನ ತಲುಪಲಿದ್ದು, ನಿಮ್ಮ ಸೇವಾ ದೀಕ್ಷೆಯಿಂದ ಅಂಗಾಂಗ ದಾನ ಮಾಡಲು ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಮಾತೃ ಹೃದಯದಿಂದ ಬಡವರ ಏಳಿಗೆಗಾಗಿ ಸೇವಾ ತಂಡದ ಮೂಲಕ ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿನೂತನವಾದ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ಇಂಥ ನಿರ್ಮಲ ಮನಸ್ಸಿನಿಂದ ಮಾಡುವ ಕೆಲಸದಿಂದ ಎಚ್.ಕೆ. ಪಾಟೀಲರು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸುತ್ತಿದ್ದಾರೆ ಎಂದರು.

ಸೇವಾ ತಂಡದ ಗೌರವಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಒಂದು ಸಣ್ಣ ಸಭೆಯ ಮೂಲಕ 500 ಜನ ಯುವಕರ ತಂಡ ನಿರಪೇಕ್ಷಭಾವದಿಂದ ಸೇವೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ. ಸೇವೆಯ ಮೂಲಕ ಎಲ್ಲರ ಬಾಳಲ್ಲಿ ಬೆಳಕು ತರುವ ಕೆಲಸವನ್ನು ಈ ತಂಡದ ಸದಸ್ಯರು ಮಾಡಿ ತೋರಿಸುವ ಮೂಲಕ ಜನಸೇವೆಯೇ ಜನಾರ್ದನನ ಸೇವೆ ಎನ್ನುವ ಕೆಲಸವನ್ನು ರಾಜಕೀಯ ಕಾರ್ಯಕರ್ತರ ಮೂಲಕ ಸೇವ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.

ಈ ವೇಳೆ ಅಧ್ಯಕ್ಷತೆಯನ್ನು ಪ್ರಭು ಬರಬುರೆ ವಹಿಸಿದ್ದರು. ಡಾ. ನೂರಾಣಿ, ಡಾ. ಎಸ್.ಆರ್. ನಾಗನೂರ, ಕೃಷ್ಣಾ ಪರಾಪುರ, ಎಂ.ಸಿ. ಶೇಖ, ಗುರಣ್ಣ ಬಳಗಾನೂರ, ಎಲ್.ಡಿ. ಚಂದಾವರಿ ಸೇರಿದಂತೆ ಮತ್ತಿತರರು ಇದ್ದರು. ಅಶೋಕ ಮಂದಾಲಿ ಸ್ವಾಗತಿಸಿದರು. ಬಸವರಾಜ ಕಡೆಮನಿ ನಿರೂಪಿಸಿದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್