ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಕ್ಕೇರಿ ತಾಲೂಕಿನ ಯಲ್ಲಾಪುರ (ಕ) ಗ್ರಾಮದಲ್ಲಿ ಮಂಗಳವಾರ ರೇಣುಕಾ ಯಲ್ಲಮ್ಮದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನು ನಮಗೆ ಭೂಮಿ, ಜಲ ಮುಂತಾದವುಗಳನ್ನು ನೀಡಿದ್ದು ಭಗವಂತನಿಗೆ ಕೃತಜ್ಞತೆ ಸಲ್ಲಿಸಲು ನಾಮ ಸ್ಮರಣೆ ಮಾಡಬೇಕು. ಜೀವನದಲ್ಲಿ ಹಣ, ಆಸ್ತಿಗಿಂತ ಅಧ್ಯಾತ್ಮಿಕವು ಮುಖ್ಯವಾದ್ದದ್ದು. ವಿಶಾಲವಾದ ಮನೋಭಾವನೆ ಹೊಂದಿ ತಾನು ತನ್ನವರು ಎಂದು ತಿಳಿದು ಪ್ರೀತಿ ವಾತ್ಸಲ್ಯದಿಂದ ಬದುಕಿದರೇ ಮಹಾತ್ಮರು ಎನಿಸಿಕೊಳ್ಳುತ್ತಾರೆ. ಈ ಶರಿರಕ್ಕೆ ಬೆಲೆ ದೋರೆಯಬೇಕಾದರೇ ಒಳ್ಳೆಯ ಗುಣ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಕೋಳ್ಳಬೇಕು ಎಂದು ತಿಳಿಸಿದರು.ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಡಾ.ಅಮರಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಧಾರ್ಮಿಕ ಮನೋಭಾವೆ ಬೆಳಸಿಕೊಳ್ಳಬೇಕು ಎಂದರು.ಕಮತೆನಟ್ಟಿಯ ಪ್ರಭುಲಿಂಗೇಶ್ವರ ಸಂಸ್ಥಾನ ಮಠದ ಗುರುದೇವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ತವಗದ ಮುದಿ ಬಾಳಯ್ಯ ಮಹಾಸ್ವಾಮಿಗಳು ಬಸ್ಸಾಪುರದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಿದ್ದರು. ಯುವ ಧುರಿಣ ರಾಹುಲ ಜಾರಕಿಹೊಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಯಲ್ಲಾಪುರ ಪಿಕೆಪಿಎಸ್ ಅಧ್ಯಕ್ಷ ಅಡಿವೆಪ್ಪ ಜಿಂಡ್ರಾಳಿ, ಡಾ.ಲಖಮಗೌಡ ಪಾಟೀಲ, ಮಾನಿಕರಾವ ಪಾಟೀಲ, ಕರಗುಪ್ಪಿ ಗ್ರಾಪಂ ಉಪಾಧ್ಯಕ್ಷ ಕಾಶಪ್ಪ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಜಿ.ವಿ.ಮಾಳಗಿ ಕಾರ್ಯಕ್ರಮ ನಿರೂಪಿಸಿದರು.