ಶಿಷ್ಯರು ಗುರುಗಳ ಆಶಯ ಅರ್ಥೈಸಿಕೊಂಡು ಬದುಕು ಸಾಗಿಸಲಿ: ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶ್ರೀ

KannadaprabhaNewsNetwork |  
Published : Dec 17, 2024, 01:01 AM IST
ಫೋಟೊ ಶೀರ್ಷಿಕೆ: 16ಆರ್‌ಎನ್‌ಆರ್4ರಾಣಿಬೆನ್ನೂರಿನ ಚೆನ್ನೇಶ್ವರ ಮಠದಲ್ಲಿ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಕಾರ್ತಿಕ ದೀಪೋತ್ಸವ ಜರುಗಿತು.  | Kannada Prabha

ಸಾರಾಂಶ

ರಾಣಿಬೆನ್ನೂರು ಮೃತ್ಯುಂಜಯನಗರ ಚೆನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಭಾಭವನದಲ್ಲಿ ಭಾನುವಾರ ಸಂಜೆ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ನಡೆಯಿತು.

ರಾಣಿಬೆನ್ನೂರು: ಗುರುಗಳು ಯಾವಾಗಲೂ ಭಕ್ತರ ಏಳ್ಗೆಯನ್ನು ಬಯಸುತ್ತಾರೆ. ಗುರುಗಳ ಆಶಯವನ್ನು ಅರ್ಥೈಸಿಕೊಂಡು ಸಮಾಜಕ್ಕೆ ಬೇಕಾದಂತೆ ಬದುಕುವುದು ಶಿಷ್ಯನ ಕರ್ತವ್ಯ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಇಲ್ಲಿನ ಮೃತ್ಯುಂಜಯನಗರ ಚೆನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಭಾಭವನದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೀಪಕ್ಕೆ ಬಳಸುವ ಬತ್ತಿ, ಎಣ್ಣೆ, ಪಣತೆ ಎಲ್ಲವೂ ಪ್ರಕೃತಿ ದತ್ತವಾಗಿದ್ದು, ಇವೆಲ್ಲವುಗಳನ್ನು ಬಳಸಿಕೊಳ್ಳುವ ನಾವು ಪರೋಪಕಾರಾರ್ಥ ಇದಂ ಶರೀರಂ ಎನ್ನುವಂತೆ ಬದುಕಬೇಕು ಎಂದರು.

ಕಾರ್ತಿಕ ದೀಪೋತ್ಸವ ಕುರಿತು ನಿವೃತ್ತ ಪ್ರಾಧ್ಯಾಪಕ ಜಿ.ವಿ. ಕೋರಿ ಉಪನ್ಯಾಸ ನೀಡಿದರು. ಹೊನ್ನಾಳಿ ಪುರಸಭೆಯ ಸದಸ್ಯ ಡಾ. ಸುರೇಶ ಹೊಸಕೇರೆ, ಮಂಜನಗೌಡ ಸಣ್ಣಿಂಗಮ್ಮನವರ, ಬಿ.ಎಲ್. ಕುಮಾರಸ್ವಾಮಿ, ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವನಗೌಡ ಪಾಟೀಲ, ಕರಬಸನಗೌಡ ಪೊಲೀಸ್‌ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ನೆರವೇರಿಸಲಾಯಿತು.

ರಾಮಣ್ಣ ಪಾಗಾದಾರ, ಅಮೃತಗೌಡ ಹಿರೇಮಠ, ಜಗದೀಶ ಮಳೆಮಠ, ಮಂಜುಳಾ ಪಾಟೀಲ, ಚೆನ್ನವೀರಗೌಡ ಪಾಟೀಲ, ಲಲಿತಮ್ಮ ಹರನಗಿರಿ, ರತ್ನಾ, ಉಮೇಶ ವೀರಬಸಪ್ಪನವರ, ನಿವೃತ್ತ ಶಿಕ್ಷಕ ವಿ.ವೀ. ಹರಪನಹಳ್ಳಿ, ಕಸ್ತೂರೆಮ್ಮ ಪಾಟೀಲ, ಬಿದ್ದಾಡಪ್ಪ ಚಕ್ರಸಾಲಿ, ಪ್ರಭಾಕರ ಶಿಗ್ಲಿ, ಮೃತ್ಯುಂಜಯ ಪಾಟೀಲ, ಗೌರಿಶಂಕರಸ್ವಾಮಿ ನೆಗಳೂರುಮಠ, ಎಂ.ಕೆ. ಹಾಲಸಿದ್ದಯ್ಯಾ ಸ್ವಾಮಿಗಳು, ಕಲ್ಲಪ್ಪ ಅಂಗಡಕಿ, ಬಸವರಾಜ ಕುರವತ್ತಿ, ರಜನಿ ಕರಿಗಾರ, ಯುವರಾಜ ಹಿರೇಮಠ, ಎಸ್.ಎಂ. ಕರಿಗಾರ ಹಾಗೂ ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!