ಹೂವಿನಹಡಗಲಿ: ಸದಾ ಕಾಲ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕೆಂದು ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ ಆಗ್ರಹಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಪತ್ರಿಕಾ ಧರ್ಮ ತನ್ನದೇ ಆದ ಗೌರವ ಹೊಂದಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಿ ಎಂದರು.
ಮಜ್ದಾರಾ ಟ್ರಸ್ಟ್ ನ ಹಜರತ್ ಸುಫೀಯಾನ್ ಸಖಾಫಿ, ಫಾದರ್ ಡೆಂಜಿಲ್ ವೆಗಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ, ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್, ಮುಖಂಡ ಎಂ.ಬಿ. ಬಸವರಾಜ, ವಕೀಲ ಎಸ್.ಬಸವರಾಜ, ಕೋಡಿಹಳ್ಳಿ ಕೊಟ್ರೇಶ, ಬಿ.ವಿಜಯಲಕ್ಷ್ಮಿ, ಪಿ.ಪ್ರಕಾಶ್, ಜೆ.ಪ್ರಸನ್ನ ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಅಧ್ಯಕ್ಷ ಎಚ್.ಸುಭಾಷ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಸುರೇಶ ಹಲಗಿ, ಎಂ.ದಯಾನಂದ, ಕೆ.ಎಚ್.ಎಂ. ಗುರುಪ್ರಸಾದ್, ಸುರೇಶ ಅಂಗಡಿ, ಹಡಗಲಿ ಬಸವರಾಜ ನಿರ್ವಹಿಸಿದರು.