ನದಿ ಪಾತ್ರಗಳಲ್ಲಿರುವ ಜನರ ರಕ್ಷಣೆಗೆ ಸರ್ಕಾರ ಕ್ರಮವಹಿಸಲಿ

KannadaprabhaNewsNetwork |  
Published : Mar 02, 2024, 01:48 AM IST
1ಕೆಜಿಎಲ್ 15 | Kannada Prabha

ಸಾರಾಂಶ

ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು.

ವಿಧಾನ ಸೌಧದಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ನದಿ ಪಾತ್ರಗಳಲ್ಲಿರುವ 8 ಗ್ರಾಮಗಳು ಮಳೆ ಬಂದರೆ ಜಲಾವೃತಗೊಂಡು ಅಲ್ಲಿನ ವಾಸಿಗಳು ಪಡುವ ಬವಣೆ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ನದಿಗೆ ತಡೆಗೋಡೆ (ರಕ್ಷಣಾ ಬೇಲಿ) ಹಾಕುವ ಈ ಯೋಜನೆಗೆ 150 ಕೋಟಿ ಅಗತ್ಯವಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೂ ಬಂದಿದ್ದು ಅನುದಾನ ಲಭ್ಯತೆ ಆಧಾರದಡಿ ಕ್ರಮಕೈಗೊಳ್ಳಲಾಗುವುದು. ಈ ಬಜೆಟ್ ಅನುದಾನದಲ್ಲೆ ಕಾಮಗಾರಿಗೆ ಅನುದಾನ ಮೀಸಲಿಡಲಾಗುವುದು. ಎಂಬ ಭರವಸೆ ನೀಡಿದರು.

ಸದನದ ಗಮನ ಸೆಳೆದ ಕೃಷ್ಣಮೂರ್ತಿ:ಸವಿವರವಾಗಿ ನದಿ ಪಾತ್ರದ 8 ಗ್ರಾಮಗಳಲ್ಲಿ ಮಳೆ ಬಂದರೆ ಅಲ್ಲಿನ ಜನ, ಜಾನುವಾರು ಪಡುವ ಭವಣೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಕ್ಷೇತ್ರದ ಶಾಸಕರು ಅಲ್ಲಿನ ಗ್ರಾಮಸ್ಥರು ಮತ್ತು ಜಾನುವಾರುಗಳ ರಕ್ಷಣೆಗಾಗಿ ರಕ್ಷಣಾ ಗೋಡೆ ಅತ್ಯಗತ್ಯವಿದೆ. ಈ ಬಾರಿ ಮಳೆ ಬಂದು ಅವಘಡ ಸಂಭವಿಸುವ ಮುನ್ನ ಸರ್ಕಾರ ಕ್ರಮವಹಿಸಬೇಕು ಎಂದು ಸದನದ ಗಮನ ಸೆಳೆದರಲ್ಲದೆ ಈ ವರ್ಷದ ಬಜೆಟ್ ನಲ್ಲಿಯೇ ಈ ಕಾಮಗಾರಿಯನ್ನು ಸೇರಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?