ವಿದ್ಯಾರ್ಥಿಗಳು ಭಾವೈಕ್ಯದ ಬದುಕು ರೂಢಿಸಿಕೊಳ್ಳಲಿ

KannadaprabhaNewsNetwork |  
Published : Jan 28, 2024, 01:16 AM IST
27ಡಿಡಬ್ಲೂಡಿ8ಧಾರವಾಡದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ದಶಮಾನೋತ್ಸವದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದರು. | Kannada Prabha

ಸಾರಾಂಶ

ಪಾಲಕರು ಮತ್ತು ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳೆಂದು ಭೇದ ಭಾವ ಎಣಿಸದೇ ಎಲ್ಲರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಮಹಿಳೆಯರು ಉನ್ನತ ವಿದ್ಯಾರ್ಜನೆ ಮಾಡಿದಾಗ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಸಾಧ್ಯ

ಧಾರವಾಡ: ಭಾರತದ ಐಕ್ಯಮಂತ್ರದ ಉನ್ನತ ಪರಂಪರೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ಭಾವೈಕ್ಯದ ಬದುಕನ್ನು ರೂಢಿಸಿಕೊಳ್ಳಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಆರ್.ಚರಂತಿಮಠ ಪಬ್ಲಿಕ್ ಶಾಲೆಯ ದಶಮಾನೋತ್ಸವ ಹಾಗೂ ನೂತನ ಇಂಟರ್‌ನ್ಯಾಷನಲ್ ಪೂರ್ವ ಪ್ರಾಥಮಿಕ ವಿಭಾಗ ಉದ್ಘಾಟಿಸಿದ ಅವರು, ಎಲ್.ಕೆ.ಜಿ.ಯಿಂದ ವಿವಿವರೆಗೆ ನಡೆಯುವ ಕಲಿಕೆಯ ಅನಂತ ವಿಚಾರಗಳ ಜತೆಗೆ ವಿದ್ಯಾರ್ಥಿಗಳು ಉನ್ನತ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳಬೇಕು. ಯಾವುದೋ ಸೀಮಿತ ದೃಷ್ಟಿಕೋನದ ಕಕ್ಷೆಗೆ ಒಳಪಟ್ಟು ಬೆಳೆಯದೇ ಎಲ್ಲರನ್ನೂ ಪ್ರೀತಿಸುವ ವಿಶಾಲ ಮನೋಭೂಮಿಕೆಯ ಕೂಡಿ ಬಾಳುವ ಸ್ನೇಹ ದೀಕ್ಷೆ ವಿದ್ಯಾರ್ಥಿ ಹಂತದಿಂದಲೇ ಸ್ವೀಕರಿಸಿದಾಗ ಬದುಕು ಸಂತೋಷದ ಸಿಹಿ ಕ್ಷಣಗಳಿಂದ ನಳನಳಿಸುತ್ತದೆ ಎಂದರು.

ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶೀವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಪಾಲಕರು ಮತ್ತು ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳೆಂದು ಭೇದ ಭಾವ ಎಣಿಸದೇ ಎಲ್ಲರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಮಹಿಳೆಯರು ಉನ್ನತ ವಿದ್ಯಾರ್ಜನೆ ಮಾಡಿದಾಗ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದರು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ಶಾಲೆಯ ಪ್ರಾಚಾರ್ಯ ಅಶ್ವಿನಿ ಚಿಕ್ಕಬಳ್ಳಾಪೂರ ಮಾತನಾಡಿದರು. ಪಾಲಿಕೆ ಸದಸ್ಯರುಗಳಾದ ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಎ.ಆರ್.ಸಿ. ಪ್ರತಿಷ್ಠಾನದ ನಿರ್ದೇಶಕಿ ಸುಜಾತಾ ಚರಂತಿಮಠ, ಪಕ್ಷಿ ತಜ್ಞ ಪ್ರಕಾಶ ಗೌಡರ, ನ್ಯಾಯವಾದಿ ಭೈರವ ಚರಂತಿಮಠ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇದ್ದರು. ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಗುಂಪು ನೃತ್ಯ, ಲೇಝಿಮ್ ನೃತ್ಯ, ಭರತ ನಾಟ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!