ಧಾರವಾಡ: ದೇಶದ ಇತಿಹಾಸದಲ್ಲಿ ಕೆಲ ವೈಯಕ್ತಿಕ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಕೆಳವರ್ಗದವರ ಇತಿಹಾಸವನ್ನು ಮರೆಮಾಚಿರುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ನಿಜವಾದ ಇತಿಹಾಸ ಶೋಧಿಸಿ ಪಠ್ಯದಲ್ಲಿ ಸೇರಿಸುವ ಕೆಲಸವಾಗಬೇಕು ಎಂದು ಅಥಣಿಯ ನಿವೃತ್ತ ಪ್ರಾಚಾರ್ಯ ಡಾ. ಜೆ.ಪಿ. ದೊಡಮನಿ ವಿಷಾಧಿಸಿದರು.
ಕೃತಿ ಬಿಡುಗಡೆ
ಇದೇ ಸಂದರ್ಭದಲ್ಲಿ ಹಿಪ್ಪರಗಿ ಸಿದ್ಧರಾಮ ಸಂಪಾದಿತ “ನಮ್ಮ ಸಂವಿಧಾನ” ಕಥಾಸಂಕಲನ ಮತ್ತು ಗಣಪತಿ ಗೋ. ಚಲವಾದಿ (ಗಗೋಚ) ವಿರಚಿತ “ಎದ್ಯಾಗಿನ ಬ್ಯಾನಿ” ಕಥಾಸಂಕಲನವನ್ನು ಬೆಳಗಾವಿಯ ಪ್ರೊ. ಹರೀಶ ಕೋಲ್ಕಾರ ಲೋಕಾರ್ಪಣೆ ಮಾಡಿ, ಸ್ವಾತಂತ್ರ್ಯದ ಹೆಜ್ಜೆಗಳನ್ನು ಶೋಧಿಸಬೇಕಿ ಎಂದರು.ಎರಡೂ ಕೃತಿಗಳನ್ನು ಅಧ್ಯಾಪಕ ಡಾ. ವಿ.ಜಿ. ಪೂಜಾರ ಪರಿಚಯಿಸಿದರು. ಎರಡು ಕೃತಿಯಲ್ಲಿನ ಕಥೆಗಳು ದಲಿತ ಮಹಿಳೆ ಸಂವೇದನೆ, ದಲಿತರ ಮೇಲಿನ ಶೋಷಣೆ, ಕ್ರೌರ್ಯ, ಜಾತಿ, ಬಡವ-ಶ್ರೀಮಂತ ಹಾಗೂ ಸಂವಿಧಾನ ಕುರಿತಾಗಿವೆ. ಮಾನವೀಯ ಮೌಲ್ಯಗಳನ್ನು ಕೇಂದ್ರೀಕರಿಸಿ ಬರೆಯಲಾಗಿದೆ. ಒಟ್ಟಾರೆ ಸಂವಿಧಾನ ಎಲ್ಲರ ಬದುಕಿನ ಗ್ರಂಥವಾಗಬೇಕೆಂಬ ಅಂಶವೂ ಇದೆ ಎಂದರು.ನಂತರ ವಿವಿಧ ಕ್ಷೇತ್ರದ ಸಾಧಕರಾದ ಡಾ. ಜಗನ್ನಾಥ ದೊಡಮನಿ (ಜಾಗೃತಿ), ಪ್ರಭಾ ಭೋರಗಾಂವಕರ (ಪ್ರಕಾಶನ), ಡಾ. ಶರಣಮ್ಮ ಪಾಟೀಲ (ಶಿಕ್ಷಣ), ಡಾ. ವೈ,ವೈ. ಕೊಕ್ಕನವರ (ಸಾಹಿತ್ಯ), ಗಾಯತ್ರಿ ಹಡಪದ (ರಂಗಭೂಮಿ), ಬಸವರಾಜ ಹಿರೇಮಠ (ಪತ್ರಿಕಾರಂಗ), ಶ್ರೀಶೈಲಗೌಡ ಕಮತರ (ಸಮಾಜಸೇವೆ), ಮಹೇಶ ಎಂ. ತುಪ್ಪದ (ಸಮಾಜಸೇವೆ), ಪಾರ್ವತಿದೇವಿ ತುಪ್ಪದ (ಸಾಹಿತ್ಯ) ಮುಂತಾದವರನ್ನು ಸನ್ಮಾನಿಸಲಾಯಿತು. ಗಣಕರಂಗ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.