ಕನ್ನಡಪ್ರಭ ವಾರ್ತೆ ಪಾವಗಡ ಬೇಸಿಗೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ಕಾಶ್ಮೀರ ಪಹಲ್ಗಾಮ್ನಲ್ಲಿ ಉಗ್ಗರು ಏಕಾಏಕಿ ದಾಳಿ ನಡೆಸಿ ಭಾರತಿಯನ್ನು ಹತ್ಯೆಗೈದಿದ್ದು ಪೈಚಾಚಿಕ ಕೃತ್ಯವಾಗಿದೆ. ಈ ನೀಚ ಉಗ್ರರಿಗೆ ತಕ್ಕ ಶಾಸ್ತಿ ಆಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ವಿಭಾಗದ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಆಗ್ರಹಿಸಿದರು.ಕರ್ನಾಟಕ ರಾಜ್ಯ ರೈತ ಪಾವಗಡ ತಾಲೂಕು ಶಾಖೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರು ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಮಟ್ಟಹಾಕುವಂತೆ ಆಗ್ರಹಿಸಿದರು.
ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ಕನ್ನಮೇಡಿ ಕೃಷ್ಣಮೂರ್ತಿ,ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ,ತಾಲೂಕು ಕಾರ್ಯದರ್ಶಿ, ರಮೇಶ್, ಸಿ.ಕೆ.ಪುರದ ನಾಗಪ್ಪ,ಗೋವಿಂದಪ್ಪ,ಈಶ್ವರಪ್ಪ, ಹೊಸಕೋಟೆ ಗೋಪಾಲ್, ನಾಗಪ್ಪ,ಕಿಲಾರ್ಲಹಳ್ಳಿಯ ಈರಣ್ಣ, ರಾಮಪ್ಪ, ಹನುಮಂತರಾಯಪ್ಪ, ನಾಗೇಂದ್ರ, ವಿ.ಇ.ಈಶ್ವರಪ್ಪ, ಈರಣ್ಣ ಇತರರಿದ್ದರು.