ನೇಕಾರ ಸಮುದಾಯ ಒಳ ಪಂಗಡ ಬಿಟ್ಟು ಒಂದಾಗಲಿ

KannadaprabhaNewsNetwork |  
Published : Apr 20, 2026, 01:15 AM IST
ಪೋಟೋ19ಎಂ ಎಲ್ ಕೆ2ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಸಾಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚಲನ ಚಿತ್ರ ಗೀತೆ ರಚನಾಕಾರ ಡಾ ವಿ.ನಾಗೇಂದ್ರ ಪ್ರಸಾದ್ ಮಾತನಾಡಿದರು | Kannada Prabha

ಸಾರಾಂಶ

ದೇವರ ದಾಸಿಮಯ್ಯ ಜಯಂತಿಯಲ್ಲಿ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿಕೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಒಳ ಪಂಗಡ ಕೈ ಬಿಟ್ಟು ಸಂಘಟಿತರಾದಲ್ಲಿ ನೇಕಾರ ಸಮುದಾಯದ ಅಭಿವೃದ್ಧಿ ಸಾಧ್ಯವಿದೆ ಎಂದು ಚಲನಚಿತ್ರ ಗೀತೆ ರಚನಾಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದರು.

ತಾಲೂಕಿನ ಕೊಂಡ್ಲಹಳ್ಳಿ ಸಾಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಜನಾಂಗವಾಗಿರುವ ನೇಕಾರ ಸಮುದಾಯ ಒಳ ಪಂಗಡದ ಹೆಸರಲ್ಲಿ ಹರಿದು ಹಂಚಿಹೋಗಿದೆ. ಒಳಪಂಗಡ ಬಿಟ್ಟು ಒಟ್ಟಾಗಬೇಕು. ಸಮುದಾಯ ಜಾಗೃತರಾಗಬೇಕು. ಬಿನ್ನಾಭಿಪ್ರಾಯಗಳು ದೂರ ಸರಿಸಿ ಎಲ್ಲಾ ಪಂಗಡಗಳು ಒಂದಾಗಬೇಕು. ಇದರಿಂದ ಸಮುದಾಯದ ಶಕ್ತಿ ಇಮ್ಮಡಿಯಾಗಲಿದೆ ಎಂದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನೇಕಾರ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕು. ಇದರಿಂದ ಸಮುದಾಯ ಸಮಾಜದಲ್ಲಿ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದರು.

ನೇಕಾರ ಒಕ್ಕೂಟದ ತಾಲೂಕು ಅಧ್ಯಕ್ಷ ಕೆ.ಸಿ.ಮಂಜುನಾಥ ಮಾತನಾಡಿ, ನೇಕಾರ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಲ್ಲದೆ ದೇವರ ದಾಸಿಮಯ್ಯ ಜನ್ಮಸ್ಥಳದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಇದಕ್ಕೆ ಸಮುದಾಯದ ಜನಪ್ರತಿನಿಧಿಗಳು ಒತ್ತಡ ತರಬೇಕು ಎಂದರು.

ಈ ಸಂದರ್ಭದಲ್ಲಿ ದಾವಣಗೆಗೆ ಜಿಲ್ಲಾ ನೇಕಾರ ವೇದಿಕೆ ಉಪಾಧ್ಯಕ್ಷ ವಿ.ಪಿ.ಲಕ್ಷ್ಮೀ ನಾರಾಯಣ, ಕಿರುತೆರೆ ಕಲಾವಿದೆ ಸ್ವಪ್ನ ದೀಕ್ಷಿತ್, ನಿವೃತ್ತ ತಹಸೀಲ್ದಾರ್ ಗರುಮೂರ್ತಿ, ಪಿಎಸ್ಐ ರವಿಕುಮಾರ್, ಅಣ್ಣಪ್ಪ, ವಿ.ಪಿ.ರಾಜು ಸೇರಿದಂತೆ ಹಲವರು ಇದ್ದರು.

ಇದೇ ವೇಳೆ ದೇವರ ದಾಸಿಮಯ್ಯ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ನಡೆಯಿತು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ತಿರಸ್ಕರಿಸಲು ಕರೆ
ಸಿದ್ಧಾರ್ಥ ಕೆಪಿಎಲ್‌ ಸೀಸನ್ 2ರ ಉದ್ಘಾಟನೆ