ಕನ್ನಡಪ್ರಭ ವಾರ್ತೆ ಹಾಸನ
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿಇಒ, ಪ್ರಕೃತಿ ಸಂಪನ್ಮೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಆಗಬೇಕು. ವಿಶ್ವ ಜನಸಂಖ್ಯೆ ಬಗ್ಗೆ ಅರಿವು ಅಗತ್ಯ. ನಮ್ಮ ಯುವಕರಿಗೆ ಜಾಗೃತಿ ಬೇಕಾಗಿದೆ ಎಂದರು. ಈ ವರ್ಷದ ಘೋಷ ವಾಕ್ಯ ಯುವ ಸಬಲೀಕರಣವಾಗಿದೆ. ಜನ ಸಂಪನ್ಮೂಲ ವಿಚಾರ ತಿಳಿಯಬೇಕು. ಕ್ವಾಂಟಾ ಅಧ್ಯಕ್ಷ ಡಾ. ಜಿ.ಎನ್. ಬಸವರಾಜು ಮಾಧ್ಯಮದೊಂದಿಗೆ ಮಾತನಾಡಿ, ಇವತ್ತು ವಿಶ್ವ ಜನಸಂಖ್ಯೆ ದಿನಾಚರಣೆ. ಜನಸಂಖ್ಯೆ ದಿನೆ ದಿನೆ ಬೆಳೆಯುತ್ತಿದೆ. ಒಂದೊಂದು ದೇಶ ಒಂದೊಂದು ರೀತಿ ಆಚರಿಸುತ್ತಿದೆ. ಯೂತ್ ಡೆವಲಪ್ಮೆಂಟ್ ಈ ವರ್ಷ ಘೋಷವಾಕ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಉದ್ಯೋಗಕೊಡಬೇಕು. ಉತ್ತಮ ಸಂಸ್ಕೃತಿ ಬೆಳೆಸಿ ಸಮಾಜಕ್ಕೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವಜನರು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂಸೇವಾ ಸಂಘಟನೆಗಳು, ರೋಟರಿ ಸದಸ್ಯರು, ವೈದ್ಯರು, ಸಮಾಜಸೇವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಜನಸಾಮಾನ್ಯರ ಸಹಭಾಗಿತ್ವದಿಂದ ವಿಶ್ವ ಜನಸಂಖ್ಯಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಜನಸಂಖ್ಯೆ ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ಸಮಾಜದಲ್ಲಿ ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ವಾಕಥಾನ್ ಮತ್ತು ಮಾನವ ಸರಪಳಿಯಲ್ಲಿ ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಕ್ವಾಂಟಾ ಕಾರ್ಯದರ್ಶಿ ಯತೀಶ್, ಖಜಾಂಚಿ ಹೇಮಂತ್, ಶಿವಕುಮಾರ್, ನಟರಾಜು ಇತರರು ಉಪಸ್ಥಿತರಿದ್ದರು