ಹುಬ್ಬಳ್ಳಿ:
ತಾಲೂಕಿನ ಅದರಗುಂಚಿಯ ಚನ್ನಬಸವ ಕಲ್ಯಾಣ ಮಂಟಪದ ಮಹಾಕವಿ ಕುಮಾರವ್ಯಾಸ ವೇದಿಕೆಯಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ ಗ್ರಾಮೀಣ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂದು ಪಾಲಕರು ಕನ್ನಡ ಭಾಷೆ ಬಿಟ್ಟು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ ಎಂದ ಅವರು, ವೃತ್ತಿಗೆ, ಉನ್ನತ ವ್ಯಾಸಂಗಕ್ಕೆ ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದ್ದರೂ ಮಾತೃಭಾಷೆಯ ನಿರ್ಲಕ್ಷ್ಯ ಸಲ್ಲದು. ಪಾಲಕರು ಮಕ್ಕಳಿಗೆ ಕನ್ನಡ ಕಲಿಸುವ ಜತೆಗೆ ಹೆಚ್ಚು ಬಳಸಬೇಕು ಎಂದರು.ವಚನ ಸಾಹಿತ್ಯ, ಜಾನಪದ ಸಾಹಿತ್ಯದ ಮೂಲಕ ಕನ್ನಡ ಭಾಷೆ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹ. ಈ ಕಾರ್ಯವು ಮುಂದೆಯೂ ಸಾಗಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಸುಧಾರಣೆಗೆ ಅನುದಾನ ನೀಡದೆ ಕುಂಟು ನೆಪ ಮುಂದಿಟ್ಟುಕೊಂಡು 7000 ಸರ್ಕಾರಿ ಶಾಲೆ ಬಂದ್ ಮಾಡುವ ಹುನ್ನಾರ ನಡೆಯುತ್ತಿದ್ದು ಇದರಿಂದ ಹಿಂದೇ ಸರಿಯಬೇಕು ಎಂದು ಒತ್ತಾಯಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ನಿವೃತ್ತ ಶಿಕ್ಷಕ ಎಫ್.ಎಸ್. ಅಂಚಿ ಸೇರಿದಂತೆ ಹಲವರು ಮಾತನಾಡಿದರು. ವೇದಮೂರ್ತಿ ಶಿವರುದ್ರಯ್ಯ ಹಿರೇಮಠ, ಡಾ. ರಾಮು ಮೂಲಗಿ, ಸಣ್ಣಕ್ಕಿ ಲಕ್ಷ್ಮಣ, ಪ್ರಕಾಶ ಬೆಂಡಿಗೇರಿ, ಎಸ್.ಎಸ್. ಪಾಟೀಲ, ರತ್ನವ್ವ ಕಳ್ಳಿಮನಿ, ಸಿ.ಜಿ. ಪಾಟೀಲ, ಅಲ್ಲಿಸಾಬ್ ಮಂಟಗಣಿ, ಜಿ.ವಿ. ಕಳ್ಳಿಮನಿ ಸೇರಿದಂತೆ ಹಲವರಿದ್ದರು.
ಕಾರ್ಯಕ್ರಮದ ಬಳಿಕ ನಡೆದ ಗೋಷ್ಠಿಯಲ್ಲಿ "ರೈತರ ಬದುಕು ಮತ್ತು ಸವಾಲುಗಳು " ಕುರಿತು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ಹಿರೇಮಠ, "ಕರ್ನಾಟಕ ಏಕೀಕರಣದಲ್ಲಿ ಅದರಗುಂಚಿ ಶಂಕರಗೌಡ್ರು " ಕುರಿತು ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಉಪನ್ಯಾಸ ನೀಡಿದರು. ನಂತರ ಹಲವು ಕವಿಗಳಿಂದ ಕವಿಗೋಷ್ಠಿ ನೆರವೇರಿತು.
ಗ್ರಾಮದ ಚನ್ನಬಸವ ಕಲ್ಯಾಣ ಮಂಟಪದಿಂದ ತಾಯಿ ಭುವನೇಶ್ವರಿ, ಅದರಗುಂಚಿ ಶಂಕರಗೌಡ್ರ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಮೋಹನ ಮಿಸ್ಕಿನ್ ಅವರ ಮೆರವಣಿಗೆಗೆ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಚಾಲನೆ ನೀಡಿದರು. ಬಳಿಕ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭಹೊತ್ತು ಸಾಗಿದರೆ, ಕಲವು ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.
ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ