ಉಡುಪಿ: ಜಯ ಕರ್ನಾಟಕದ ಜಿಲ್ಲಾ ಶಾಖೆಯನ್ನು ಪುನಃಶ್ಚೇತನಗೊಳಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗುವ ಸದುದ್ದೇಶದಿಂದ 2026ರ ಜೂ. 7ರಂದು ಇಲ್ಲಿನ ಸನಿಲ್ ಪ್ಲಾಜದಲ್ಲಿ ಸಮಾಲೋಚನಾ ಸಭೆ ಸುಧಾಕರ್ ರಾವ್ ಬಾರ್ಕೂರು ನೇತೃತ್ವದಲ್ಲಿ ಜರುಗಿತು. ಲೂವಿಸ್ ಎಮ್. ಅಧ್ಯಕ್ಷರಾಗಿ, ನಿತ್ಯಾನಂದ ಅಮೀನ್ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಿತ್ಯಾನಂದ ಅಮೀನ್, ಲೋಕೇಶ್ ಹೆಗ್ಡೆ, ಲೂವಿಸ್ ಎಂ., ಕರುಣಾಕರ ಪೂಜಾರಿ, ಸುಬ್ರಮಣ್ಯ, ಪ್ರಶಾಂತ್, ಪ್ರತಾಪ್ ಶೆಟ್ಟಿ, ನಾಗರಾಜ ಗಾಣಿಗ, ರತ್ನಾಕರ್ ಹಾವಂಜೆ, ಪ್ರದೀಪ್ ಕಲ್ಮಾಡಿ, ಗಿರೀಶ್ ಕಲ್ಮಾಡಿ, ವಿವೇಕ್ ಕಲ್ಮಾಡಿ, ನೀತಿನ್ ಕುಂದರ್, ಸುಬ್ರಹ್ಮಣ್ಯ ಬೈಂದೂರು, ಮಾಣಿಕ್ಯ ಬೈಂದೂರು, ಶಂಕರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮತ್ತು ಶ್ರೀನಿವಾಸ ಶೆಟ್ಟಿ ತೋನ್ಸೆ ಸಾಂದರ್ಭಿಕ ಸೂಕ್ತ ಸಲಹೆಯನ್ನಿತ್ತು ಸಹಕರಿಸಿದರು. ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.