ನಿರಂತರ ಯೋಗಾಭ್ಯಾಸದಿಂದ ಆಯುಷ್ಯ ವೃದ್ಧಿ: ಡಾ. ಸದಾಶಿವ

KannadaprabhaNewsNetwork |  
Published : Jun 23, 2024, 02:06 AM IST
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು, ಅವರನ್ನು ಉತ್ಸಾಹಶೀಲರನ್ನಾಗಿ ಮಾಡಲು ಆರೋಗ್ಯಕರ ಯೋಗಭ್ಯಾಸ ಮುಖ್ಯವಾಗಿದೆ.

ದೊಡ್ಡಬಳ್ಳಾಪುರ: ನಿರಂತರ ಯೋಗಾಭ್ಯಾಸ ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ಶತಾಯುಷಿಗಳಾಗಿ ಬದುಕಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು, ಅವರನ್ನು ಉತ್ಸಾಹಶೀಲರನ್ನಾಗಿ ಮಾಡಲು ಆರೋಗ್ಯಕರ ಯೋಗಭ್ಯಾಸ ಮುಖ್ಯವಾಗಿದೆ. ದಿನನಿತ್ಯದ ಜೀವನದಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಅರೋಗ್ಯವನ್ನು ಸುಸ್ಥಿರದಲ್ಲಿಡಲು ಯೋಗಾಭ್ಯಾಸ ಅತ್ಯವಶ್ಯಕ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯೋಗಾಸನಗಳನ್ನು ಪರಿಚಯಿಸಿ ನಮ್ಮ ದೇಶದ ಪರಿಕಲ್ಪನೆಯನ್ನು ಸಾರುತ್ತಿರುವುದು ಹೆಮ್ಮ ಪಡುವ ಸಂಗತಿಯಾಗಿದೆ ಎಂದು ಹೇಳಿದರು.

ಯೋಗಪಟು ಚೇತನ್ ರಾಮ್ ಮಾರ್ಗದರ್ಶನದಲ್ಲಿ ಯೋಗಭ್ಯಾಸ ನಡೆಸಲಾಯಿತು. ಪ್ರಾಧ್ಯಾಪಕರಾದ ಸಿದ್ದರಾಮರಾಜು , ಪ್ರೊ.ನೀರಜಾ ದೇವಿ, ಡಾ.ಪ್ರಕಾಶ್ ಮಂಟೆದ, ರಾಜ್ ಕುಮಾರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ