ಹುಬ್ಬಳ್ಳಿ:
ಜೀವನ ಸಂಘಟನೆಗಳ ಸರಮಾಲೆ. ಏರಿಕೆ, ಇಳಿಕೆ ಕೂಡುವುದು, ಅಗಲುವುದು ಅನಿವಾರ್ಯ. ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಮರೆಯುತ್ತಾನೆ. ದೃಢ ಸಂಕಲ್ಪ ಶಕ್ತಿ ಇಲ್ಲದೇ ಇದ್ದರೆ ಮಾಡುವ ಕೆಲಸಗಳು ಕೈಗೂಡುವುದಿಲ್ಲ. ಕ್ರಿಯಾಶೀಲ ಬದುಕು ಉನ್ನತಿಗೆ ಸೋಪಾನ ಎಂದರು.
ಸಮಾರಂಭ ಉದ್ಘಾಟಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಾಯಕ ಜೀವನದಿಂದ ಉನ್ನತಿ ಕಾಣಲು ಸಾಧ್ಯ. ಜೆ.ಬಿ. ಮಲ್ಲಾರಾಧ್ಯರು ಆಡಿದ ಮಾತುಗಳಿಂದ ನನ್ನ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಾಯಿತು. ತಂದೆ ಮಾತಿಗಿಂತ ತಾಯಿ ಮಾತು ಮಕ್ಕಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಿದರು. ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶ್ರೀ, ಶಿರಕೋಳ ಗುರುಸಿದ್ಧೇಶ್ವರ ಶ್ರೀ ಆಶೀರ್ವಚನ ನೀಡಿದರು.ವಿಶ್ವನಾಥ ಹಿರೇಗೌಡರು ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೃಷಿ ವಿವಿಯ ಡಾ. ಎಸ್.ಎ. ಪಾಟೀಲ, ಪಿ.ಎಂ. ಪಾಟೀಲ, ಬಸನಗೌಡ ಪಾಟೀಲ, ಪ್ರಕಾಶ ಬೆಂಡಿಗೇರಿ, ಬಸವರಾಜ ಸುಳ್ಳದ, ಆರ್.ಎಂ. ಹಿರೇಮಠ, ವಿ.ಜಿ. ಪಾಟೀಲ, ಜಿ.ವಿ. ಕಲಾ ಬಳಗದ ಅಧ್ಯಕ್ಷ ಗದಿಗಯ್ಯ ಹಿರೇಮಠ ಸೇರಿದಂತೆ ಹಲವರಿದ್ದರು.