ಕೊಪ್ಪಳ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವಾದರ್ಶ ಸಮಾಜದ ಪ್ರತಿಯೊಬ್ಬರೂ ಪಾಲಿಸಿದರೇ ಬದುಕು ಸಾರ್ಥಕವಾಗುತ್ತದೆ ಎಂದು ಅನ್ನದಾನೇಶ್ವರ ಶಾಖಾಮಠದ ವಿಶ್ವೇಶ್ವರ ದೇವರು ಹೇಳಿದರು.
ಕಾಯಕ,ಕೃಷಿ ಮಾಡುತ್ತಾ ಸಹೋದರ ಸಮಾಜದೊಂದಿಗೆ ಅನೋನ್ಯತೆಯಿಂದ ಬೆರೆತು ಜೀವನ ನಡೆಸುವ ಸ್ಥಿತಿ ಮಾದರಿಯಾಗಿದೆ. ಪುಣ್ಯಪುರುಷರು ಹಾಕಿಕೊಟ್ಟ ಪರಂಪರೆಯಲ್ಲಿ ರಡ್ಡಿ ಸಮಾಜ ಮುಂದುವರೆದಿದ್ದು ಶಿಕ್ಷಣ, ಜೌದ್ಯೋಗಿಕವಾಗಿ, ಇತರೆ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ವಹಿಸಿ ಉತ್ತಮ ಸಾಧನೆ ಮಾಡುತ್ತಿದೆ. ಮಲ್ಲಮ್ಮ ಕೇವಲ ರಡ್ಡಿ ಸಮಾಜಕ್ಕೆ ಸೀಮಿತವಲ್ಲ ಅವರು ಈ ದೇಶದ ಆಸ್ತಿಯಾಗಿದ್ದಾಳೆ ಎಂದರು.
ಕುಕನೂರು ತಾಲೂಕು ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಮಲ್ಲಮ್ಮನವರು ತಮ್ಮ ಕುಟುಂಬದ ಎಲ್ಲ ನೋವು ಸಹಿಸಿಕೊಂಡು ತನ್ನಲ್ಲಿರುವ ದೈವಿ ಭಕ್ತಿಯಿಂದ, ತಾಳ್ಮೆಯಿಂದ ಬಂದ ಕಷ್ಟ ಕಾರ್ಪಣ್ಯ ಎದುರಿಸಿ ಭಕ್ತಿ ಮತ್ತು ನಂಬಿಕೆಯ ಮೂಲಕ ಏನನ್ನಾದರು ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ಶ್ರದ್ಧೆ ಮತ್ತು ನಂಬಿಕೆಯಿಂದ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಲ್ಲಮ್ಮ ಸಾಕ್ಷಿ ಎಂದು ಬಣ್ಣಿಸಿದರು.ನಿವೃತ್ತ ಪ್ರಾಚಾರ್ಯ ಎಸ್.ಎನ್. ಶಿವರಡ್ಡಿ ಮಾತನಾಡಿ, ಎರಡು ದಶಕಗಳ ಹಿಂದೆ ಪ್ರಥಮ ಬಾರಿ ಸಂಗನಹಾಲದಲ್ಲಿ ಮಲ್ಲಮ್ಮ ಜಯಂತಿ ಆಚರಿಸಲಾಗಿದೆ.ಈಗ ಸರ್ಕಾರದಿಂದ ರಾಜ್ಯಾದ್ಯಂತ ಜಯಂತಿ ಆಚರಣೆ ಮಾಡುತ್ತಿದೆ. ಮಲ್ಲಮ್ಮ ಓರ್ವ ಜಾತಿಗೆ ಸೀಮಿತವಾಗಿಲ್ಲ ಶಿವಶರಣೆ ತತ್ವಗಳನ್ನು ಅಳವಡಿಸಿಕೊಂಡು ಮಹಾಸ್ವಾಧಿಯಾಗಿದ್ದಾಳೆ ಎಂದರು.
ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ, ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಸುರೇಶ ಮಾದಿನೂರು, ಸಿಎಂ ಈಶ್ವರ ಅಟಮಾಳಗಿ, ಶರಣಪ್ಪ ಮುತ್ತಾಳ, ಸಂಗಮೇಶ ಗಡಾದ, ಕುಮಾರ ಗಡಾದ, ಪುಂಡಪ್ಪ ಗಿರಡ್ಡಿ, ಅಮರೇಶ ಶಿವರಡ್ಡಿ, ಬಸವರಡ್ಡಿ ಬೀಡನಾಳ, ಅಡಿವೆಪ್ಪ ಲಕ್ಕಲಕಟ್ಟಿ, ಗವಿಸಿದ್ದಪ್ಪ ಚೋಳಿನ, ಬಸವಂತಪ್ಪ ಗಡಾದ, ಷಣ್ಮುಖಪ್ಪ ಯರಂಗಳಿ ಇತರರಿದ್ದರು.