ಮಾರುತೇಶ್ವರ ಹಾಲೋಕಳಿ ಸಂಪನ್ನ

KannadaprabhaNewsNetwork |  
Published : May 18, 2025, 11:53 PM IST
ಆಸಂಗಿ : ಸಂಭೃಮದ ಹಾಲೋಕಳಿ ಸಂಪನ್ನ. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಹನುಮಾನ ದೇವರ ಹಾಗೂ ಲಕ್ಕವ್ವ ದೇವಿ ಜಾತ್ರೆ ನಿಮಿತ್ತ ಗ್ರಾಮೀಣ ಪರಂಪರೆ ಬಿಂಬಿಸುವ ಹಾಲೋಕಳಿ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ತಾಲೂಕಿನ ಆಸಂಗಿ ಗ್ರಾಮದಲ್ಲಿ ಹನುಮಾನ ದೇವರ ಹಾಗೂ ಲಕ್ಕವ್ವ ದೇವಿ ಜಾತ್ರೆ ನಿಮಿತ್ತ ಗ್ರಾಮೀಣ ಪರಂಪರೆ ಬಿಂಬಿಸುವ ಹಾಲೋಕಳಿ ಸಂಭ್ರಮದಿಂದ ನಡೆಯಿತು.

ಸಂಜೆ ಜರುಗಿದ ಹಾಲೋಕಳಿ ಸಂದರ್ಭದಲ್ಲಿ ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಇವರು ಹಾಲಗಂಬ ಏರುತ್ತಿದ್ದಂತೆಯೇ ಮೇಲೆ ಕುಳಿತ ವ್ಯಕ್ತಿ ಕಂಬ ಜಾರಲೆಂದೇ ಹಾಲು, ತುಪ್ಪ, ಬಾಳೆಹಣ್ಣಿನ ರಸ ಸೇರಿದಂತೆ ಇನ್ನಿತರ ಜಾರುವ ಪದಾರ್ಥ ಎರಚಿದರು. ಇವೆಲ್ಲವನ್ನು ಎದುರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು.

ಈ ಸಂದರ್ಭದಲ್ಲಿ ತವನಪ್ಪ ಕೋರಿ, ಹರ್ಷವರ್ಧನ್ ಪಟವರ್ಧನ, ದೋಂಡಿಬಾ ಗಾಯಕವಾಡ, ಬಸವರಾಜ ಖೇಮನ್ನವರ, ಲಕ್ಕಪ್ಪ ಶಿರಹಟ್ಟಿ, ರಾಜು ಪಾಟೀಲ ಸೇರಿದಂತೆ ಆಸಂಗಿ, ಅಸ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅಪಾರ ಪ್ರಮಾಣದ ಜನಸ್ತೋಮ ನೆರೆದಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ