ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಪದವಿ ಬಳಸಿ ಶ್ರೀಗಳನ್ನು ವಂಚಿಸಿ ಜೈಲು ಸೇರಿದ್ದ ಪ್ರಕಾಶ್ ಮುದೋಳ ಬೇಲ್ ಮೂಲಕ ಹೊರಕ್ಕೆ ಬಂದಿದ್ದು, ಜೊತೆಗೆ ಅನೇಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಈಗ ಸ್ವಾಮೀಜಿ ಅವರಿಗೆ ಬಾಗಲಕೋಟೆ ಮಠ ಬಿಟ್ಟು ಬೇರೆಕಡೆ ತೆರಳಲು ಜೀವ ಭಯ ಕಾಡುತ್ತಿದೆ. ಅವರಿಂದ ಅಥವಾ ಬೇರೆಯವರಿಂದ ತೊಂದರೆಯಾಗಬಹುದು ಎಂದು ಬೇರೆ ಮಠಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಾಮೀಜಿಗೆ ಪೊಲೀಸ್ ರಕ್ಷಣೆಯ ಉದ್ದೇಶದಿಂದ ಗನ್ ಮ್ಯಾನ್ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ್ ಅವರ ಗಮನ ಸೆಳೆಯುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ನಾಗೇಶ್, ಗಂಗಮತಸ್ಥ ಮುಖಂಡರಾದ ಯಜಮಾನ್ ನಂಜುಂಡಸ್ವಾಮಿ, ಉಮೇಶ್, ಚಿಕ್ಕಸ್ವಾಮಿ, ಎಂ.ಎಚ್.ಶ್ರೀಕಂಠಯ್ಯ, ಶಿವಣ್ಣ, ಶಿವಪ್ಪ, ಶಿವಕುಮಾರ್, ಗಂಗರಾಜೇ ಅರಸು, ಎಂ.ಸಿ.ಗಂಗರಾಜು, ಎಂ.ಮಹದೇವಯ್ಯ, ಮೀನುಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಸಿದ್ದಪ್ಪ ಇದ್ದರು.