ರೇಡಿಯೋ ಕೇಳುವುದರಿಂದ ಹೆಚ್ಚಲಿದೆ ಭಾಷಾ ಸ್ಪಷ್ಟತೆ: ಮಂಜುಳಾ

KannadaprabhaNewsNetwork |  
Published : Aug 24, 2024, 01:15 AM IST
ನರಸಿಂಹರಾಜಪುರ ತಾಲೂಕು ಸಿರಿಗನ್ನಡ ವೇದಿಕೆಯ ಆಶ್ರಯದಲ್ಲಿ ನಡೆದ  ಶ್ರಾವಣ ನುಡಿ ಸಿರಿ ಕಾರ್ಯಕ್ರಮದಲ್ಲಿ ಆಕಾಶವಾಣಿ ನಿವೃತ್ತ ಉದ್ಬೋಷಕಿ ಎ.ಎನ್‌.ಮಂಜುಳಾ. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್‌,ಸಾಹಿತಿ ಜಯಮ್ಮ, ಜಾನಪದ ಕಲಾವಿದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ರೇಡಿಯೋ ಜ್ಞಾನಾರ್ಜನೆಗೆ ಪೂರಕವಾದ ಮಾಧ್ಯಮವಾಗಿದ್ದು ಪ್ರತಿ ನಿತ್ಯ ರೇಡಿಯೋ ಕೇಳುವುದರಿಂದ ಕನ್ನಡ ಭಾಷೆ ಜ್ಞಾನ, ಪದಗಳ ಉಚ್ಛಾರಣೆ ಬಗ್ಗೆ ಅರಿವು ಮೂಡಲಿದೆ ಎಂದು ಆಕಾಶವಾಣಿ ಭದ್ರಾವತಿ ನಿವೃತ್ತ ಹಿರಿಯ ಉದ್ಘೋಷಕಿ ಎ.ಎನ್. ಮಂಜುಳಾ ಹೇಳಿದರು.

ಸಿರಿಗನ್ನಡ ವೇದಿಕೆಯ ಆಶ್ರಯದಲ್ಲಿ ಶ್ರಾವಣ ನುಡಿಸಿರಿ ಕಾರ್ಯಕ್ರಮ- ಉಪನ್ಯಾಸ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ರೇಡಿಯೋ ಜ್ಞಾನಾರ್ಜನೆಗೆ ಪೂರಕವಾದ ಮಾಧ್ಯಮವಾಗಿದ್ದು ಪ್ರತಿ ನಿತ್ಯ ರೇಡಿಯೋ ಕೇಳುವುದರಿಂದ ಕನ್ನಡ ಭಾಷೆ ಜ್ಞಾನ, ಪದಗಳ ಉಚ್ಛಾರಣೆ ಬಗ್ಗೆ ಅರಿವು ಮೂಡಲಿದೆ ಎಂದು ಆಕಾಶವಾಣಿ ಭದ್ರಾವತಿ ನಿವೃತ್ತ ಹಿರಿಯ ಉದ್ಘೋಷಕಿ ಎ.ಎನ್. ಮಂಜುಳಾ ಹೇಳಿದರು.

ಸಿರಿಗನ್ನಡ ವೇದಿಕೆ ತಾಲೂಕು ಘಟಕ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ಶ್ರಾವಣಿ ನುಡಿಸಿರಿ ಕಾರ್ಯಕ್ರಮದಲ್ಲಿ ರೇಡಿಯೋ, ಇಂದಿನ ದೂರದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ರೇಡಿಯೋ ಇಂದಿಗೂ ಸಹ ಅಂದಿನಂತೇ ಇದೆ. ರೇಡಿಯೊದಲ್ಲಿನ ಕಾರ್ಯಕ್ರಮ ಬದಲಾಗಿಲ್ಲ. ಬದಲಾಗಿ ಕಾರ್ಯಕ್ರಮದ ಗುಣಮಟ್ಟ ಕಡಿಮೆಯಾಗುತ್ತಿದೆ. ದೂರದರ್ಶನದಲ್ಲಿ ಇಂದು ಹತ್ತಾರು ಖಾಸಗಿ ಚಾನಲ್ ಗಳು ಹೇಳಿದ್ದನ್ನೇ ಹೇಳುವ, ತೋರಿಸಿದ ವಿಷಯವನ್ನೇ ಮತ್ತೆ ಮತ್ತೆ ತೋರಿಸುವ ಪ್ರವೃತ್ತಿಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ ಎಂದರು.

ದೂರದರ್ಶನ ನೋಡುವುದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ. ಆದರೆ, ರೇಡಿಯೋ ಕೇಳುತ್ತಲೇ ಕೆಲಸ ಮಾಡಬಹುದು. ರೇಡಿಯೋ ಮೂಲಕ ಯಾವುದೇ ಭಾಷೆ ವಿಚಾರಗಳನ್ನು ಆಲಿಸಬಹುದು. ರೇಡಿಯೋ ಆಲಿಸುವುದರಿಂದ ಕಿವಿಗೆ ಇಂಪು, ಮನಸ್ಸಿಗೂ ನೆಮ್ಮದಿ ಎಂದು ತಿಳಿಸಿದರು.

ಪ್ರತಿಯೊಬ್ಬರೂ ರೇಡಿಯೊ ಕೇಳುವ, ದಿನಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಉತ್ತಮ ಜ್ಞಾನ ಪಡೆಯಬಹುದು. ಕನ್ನಡದ ಬಗ್ಗೆ ಜ್ಞಾನವಿದ್ದರೆ ಮಾತ್ರ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ತರ್ಜುಮೆ ಮಾಡಲು ಸಾಧ್ಯ. ಪ್ರತಿಯೊಬ್ಬರು ಸ್ಪಷ್ಟವಾಗಿ ಕನ್ನಡ ಬರೆಯ ಬೇಕು, ಮಾತನಾಡಬೇಕು ಎಂದು ಸಲಹೆ ನೀಡಿದರು.

ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ಪ್ರಕಾಶ್ ಮಾತನಾಡಿ, ಸಿರಿಗನ್ನಡ ವೇದಿಕೆ 2003ರಲ್ಲಿ ವೆಂಕಟರಮಣ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು, ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡಲು ಸಿರಿಗನ್ನಡ ವೇದಿಕೆ ಸ್ಥಾಪಿಸಿದರು. ಕನ್ನಡದ ಭಾಷೆ ಕನ್ನಡಿಗರೇ ಬೆಳೆಸ ಬೇಕು. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವುದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಶರಣರ ವಚನ, ಕವಿಗಳ ಕವನ, ಉತ್ತಮ ಬರಹಗಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಂಸ್ಕಾರ ಬೆಳೆಸುವ ಕಾರ್ಯವನ್ನು ಸಿರಿಗನ್ನಡ ವೇದಿಕೆ ಮಾಡುತ್ತಿದೆ ಎಂದರು.

ಸಾಹಿತಿ ಜಯಮ್ಮ ಮಾತನಾಡಿ, ನಾನು 108 ಹೊಸ ಬಗೆಯ ಒಗಟುಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡ ಲಾಗುವುದು. ಇದನ್ನು ಓದಿ ಓದುಗರು ವಿಮರ್ಶಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಆಕಾಶವಾಣಿ ನಿವೃತ್ತ ಉದ್ಘೋಷಕಿ ಎ.ಎನ್.ಮಂಜುಳಾ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಮಲ ಸತೀಶ್, ಹಿರಿಯ ಸಾಹಿತಿ ಜಯಮ್ಮ, ಜಾನಪದ ಕಲಾವಿದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ವೇಳೆ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಮಲ ಸತೀಶ್, ಜಾನಪದ ಕಲಾವಿದ ಲೋಕೇಶ್, ಉಮಾ ದಿವಾಕರ್, ಚೈತ್ರರಮೇಶ್. ಅನ್ನಪೂರ್ಣ ಸುರೇಶ್, ಸೀಮಾ ಸದಾನಂದ, ವಾಹಿನಿ ರವಿಶಂಕರ್ ಉಪಸ್ಥಿತರಿದ್ದರು.

------

ಸಿರಿಗನ್ನಡ ವೇದಿಕೆ ತಾಲೂಕು ಘಟಕದಿಂದ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಎ.ಎನ್.ಮಂಜುಳಾ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಮಲ ಸತೀಶ್, ಹಿರಿಯ ಸಾಹಿತಿ ಜಯಮ್ಮ, ಜಾನಪದ ಕಲಾವಿದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌