ಮುಂಡರಗಿ: ನಡೆ, ನುಡಿ, ಆಚಾರ-ವಿಚಾರಗಳನ್ನು ಚೆನ್ನಾಗಿರಿಸುವುದಕ್ಕೆ ನಮ್ಮ ಬದುಕಿಗೆ ವಚನ ಸಾಹಿತ್ಯ ಅತ್ಯಗತ್ಯ. ವಚನಗಳನ್ನು ಹೇಳುವುದರಿಂದ, ಕೇಳುವುದರಿಂದ, ಆಚರಣೆ ಮಾಡುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.
ಶಿಕ್ಷಕಿ ದೀಪಶ್ರೀ ಕಣವಿ ಮೋಳಿಗೆ ಮಾರಯ್ಯನವರ ಕುರಿತು ಮಾತನಾಡಿ, ಬಸವಣ್ಣನವರ ಆದರ್ಶ ತತ್ವಗಳಿಗೆ ಮಾರುಹೋಗಿ ರಾಜಸ್ಥಾನವನ್ನು ಬಿಟ್ಟು ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಉತ್ತಮ ಶರಣನಾಗಿ ಕಾಯಕ ಮತ್ತು ದಾಸೋಹ ನಿರಂತರ ನಡೆಸಿದವರು ಶರಣ ಮೋಳಿಗೆ ಮಾರಯ್ಯನವರು. ಇಂತಹ ಶರಣರ ಜೀವನದ ಉತ್ತಮ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶರಣರನ್ನು ಕೇವಲ ಪೂಜೆಗೆ ಸೀಮಿತ ಮಾಡದೇ, ಜ್ಞಾನ ಮೂರ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದರು.
ತಾಲೂಕು ಶಸಾಪ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಲ್. ಪೊಲೀಸ್ಪಾಟೀಲ್, ಎಂ.ಜಿ. ಗಚ್ಚಣ್ಣವರ, ವೀರನಗೌಡ ಗುಡದಪ್ಪನವರ, ಶಂಕರ ಕುಕನೂರ, ಎ.ವೈ. ನವಲಗುಂದ, ವೀಣಾ ಪಾಟೀಲ, ಶಶಿಕಲಾ ಕುಕನೂರ, ಪ್ರೊ. ಕಾವೇರಿ ಭೋಲಾ, ಮಂಜುನಾಥ ಮುಧೋಳ, ಎಂ.ಎಸ್. ಹೊಟ್ಟಿನ, ಮಹೇಶ ಮೇಟಿ, ಯುವರಾಜ ಮುಂಡರಗಿ, ಕೃಷ್ಣ ಸಾಹುಕಾರ ಉಪಸ್ಥಿತರಿದ್ದರು.